ಮನುಷ್ಯ ಚರ್ಮವೋ, ಇಲ್ಲ ಎಮ್ಮೆ ಚರ್ಮವೋ?

ಮನುಷ್ಯ ಚರ್ಮವೋ, ಇಲ್ಲ ಎಮ್ಮೆ ಚರ್ಮವೋ?

ಬೆಳಗಾವಿ, ಸೆ. 24 : ನಿಮ್ದು ಮನುಷ್ಯನ ಚರ್ಮವೋ, ಇಲ್ಲ ಎಮ್ಮೆ ಚರ್ಮವೋ ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.  ಬೆಳಗಾವಿಯಲ್ಲಿಂದು ಆಯೋಜಿಸಿದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಗರಂ ಆಗಿ, ಇತಿಹಾಸ ಕಾಣದ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕ ನೆರೆ ಸಂತ್ರಸ್ತರು ಇದೀಗ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈವರೆಗೆ ಸಂತ್ರಸ್ತರಿಗೆ ನೆರವಿನ ಹಣ ನೀಡಲಾಗಿಲ್ಲ. ಕೇಂದ್ರ ಸಚಿವರ ಪ್ರವಾಸದಿಂದ ರಾಜ್ಯಕ್ಕೆ ನಯಾ ಪೈಸೆ ಹಣ ಬಂದಿಲ್ಲ. ನಿಮ್ಮದು ಮನುಷ್ಯ ಚರ್ಮವೋ, ಇಲ್ಲ ಎಮ್ಮೆ ಚರ್ಮವೋ? ಜನರಿಗೆ ಪರಿಹಾರ ನೀಡಲು ನಿಮಗೇನು ರೋಗ ಬಂದಿದೆ? ಅಧಿಕಾರ ನಡೆಸಲು ಆಗದಿದ್ದರೆ ಕೂಡಲೇ ಕೆಳಗಿಳಿಯಿರಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 7 ರಿಂದ 8 ಲಕ್ಷ ಜನ ಬೀದಿ ಪಾಲಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos