ಕಲಬುರಗಿ, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಗೆ ಮಾಜಿ ಸಚಿವ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯ ಬಿಜೆಪಿ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನರು ನಿಖಿಲ್ ಕುಮಾರಸ್ವಾಮಿಗೆ ಬತ್ತಿ ಇಟ್ಟು ಕಳುಹಿಸಿದ್ದಾರೆ. ಅಫಜಲಪೂರ ಗಾಣಗಾಪೂರ ದತ್ತನ ಸನ್ನಿಧಿಯಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಎಂದು ಅರ್ಚಕರು ಕರೆದಿದ್ದರು. ಬಳಿಕ ಅರ್ಚಕರು ನನ್ನ ಮಗನ ಹೆಸರು ಕೂಡ ನಿಖಿಲ್ ಆತ ದೀಪದ ಬತ್ತಿ ತರೋಕೆ ಹೋಗಿದ್ದಾನೆ ಎಂದು ತಿಳಿಸಿದರು. ಆದರೆ ಮಂಡ್ಯದ ಜನರು ನಿಖಿಲ್ ಕುಮಾರಸ್ವಾಮಿ ಗೆ ಬತ್ತಿ ಇಟ್ಟು ಕಳುಹಿಸಿದ್ದಾರೆ ಎಂದು ಹೇಳಿ ಗುತ್ತೆದಾರ್ ವ್ಯಂಗ್ಯವಾಡಿದರು.
ಸೋಲಿಲ್ಲದ ಸರದಾರ ಮನೆಗೆ : ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾನಿಗೆ ಮನೆಗೆ ಕಳುಹಿಸಿದ ಕಾರ್ಯಕರ್ತರಿಗೆ ಅಭಿನಂದನೆ ಹೇಳಲು ಇಷ್ಟಪಡುತ್ತನೆ. ಕಲಬುರಗಿ ಚುನಾವಣೆ ಹಿಂದಿಯ ಶೋಲೆ ಸಿನಿಮಾದ ತರಹ ಆಗಿದೆ. ಗಬ್ಬರ್ ಸಿಂಗ್ ನನ್ನು ಕೆಳಗೆ ಇಳಿಸಬೇಕಾಗಿತ್ತು. ಯಡಿಯೂರಪ್ಪ ಠಾಕೂರ್ ಸಿಂಗ್ ಇದ್ದ ಹಾಗೆ. ನಾನು ಅಮಿತಾಬ್ ಬಚ್ಚನ್ ಹಾಗೂ ಚಿಂಚನಸೂರ್ ಧರ್ಮೇಂದ್ರ ಇದ್ದ ಹಾಗೆ. ಕಾಂಗ್ರೆಸ್ನ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಸಾಂಬಾ ಇದ್ದ ಹಾಗೆ. ಅರೇ ಓ ಸಾಂಬಾ ಅಂತಾ ಖರ್ಗೆಗೆ ಗೆಲ್ಲಿಸೋದಕ್ಕೆ ಬಂದಿದ್ದ ಎಂದು ಹೇಳಿ ಟಾಂಗ್ ನೀಡಿದರು.