ಬೆಳಗಾವಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರದ ಸಮಾರಂದಲ್ಲಿ ಕುಮಾರಸ್ವಾಮಿ ಮಗನಿಗೆ ವೇದಿಕೆ ಮೇಲೆ ಕರೆದ ಡೈಲಾಗ್ ಈ ಬಾರಿ ಚುನಾವಣಾ ಪ್ರಚಾರದ ವೇಳೆ ಭಾರೀ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಇದೀಗ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾ ಮಾಡೋಕೆ ಕನ್ನದ ಚಿತ್ರರಂಗದ ನಿರ್ದೇಶಕರು ಮುಗಿ ಬೀಳುತ್ತಿದ್ದಾರೆ. ಸಿನಿಮಾ ಟೈಟಲ್ ಗಾಗಿ ಕ್ಯೂ ನಿಂತಿದ್ದಾರೆ. ಇದೀಗ ಈಟೈಟಲ್ ನಲ್ಲಿ ಸಿನಿಮಾವಾದ್ರೆ ಖಂಡಿತಾ ನಾನು ಅದರಲ್ಲಿ ನಟಿಸುತ್ತೇನೆ ಎಂದಿದ್ದಾರೆ ಖ್ಯಾತ ನಟಿ ತಾರಾ.
ಇಂದು ಬೆಳಗಾವಿಯಲ್ಲಿ ನಟಿ ತಾರಾ ಮಾಧ್ಯಮಗಳ ಜೊತೆ ಮಾತನಾಡುವಾಗ ಜೆಡಿಎಸ್ ನಾಯಕರ ವಿರುದ್ಧ ಟೀಕಾರೋಪ ಮಾಡಿದರು. ಅಷ್ಟೇ ಅಲ್ಲಾ ನಿಖಿಲ್ ಎಲ್ಲಿದ್ದೀಯಪ್ಪಾ ಚಿತ್ರದಲ್ಲಿ ನಟಿಸೋಕೆ ನಾನ್ ರೆಡಿ ಎಂದು ಹೇಳಿದ್ದಾರೆ. ನನಗೆ ಪಾತ್ರ ಚೆನ್ನಾಗಿ ಅನ್ಸದ್ರೆ ಕಥಾಹಂದರ ಇಷ್ಟ ಆದ್ರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ.
ನಿಖಿಲ್ ಎಲ್ಲಿದೀಯಪ್ಪ ಎಂಬ ಟೈಟಲ್ ಇದ್ದರು ಕೂಡ ತೊಂದರೆ ಇಲ್ಲ. ಚಿತ್ರಕ್ಕೆ ನಿಖಿಲ್ ನಾಯಕ ನಟನಾದರು ನಟನೆ ಮಾಡಲು ನಾನು ಸಿದ್ದ. ಮೋದಿ ಮತ್ತೆ ಪ್ರಧಾನಿಯಾಗ ಬೇಕು. ಮೋದಿ ಅಲೆ ಇನ್ನು ದೊಡ್ಡದಾಗುತ್ತಾ ಹೋಗುತ್ತದೆ ಎಂದಿದ್ದಾರೆ. ಅವರ ಗೆಲುವು ಖಚಿತ ಎಂದಿದ್ದಾರೆ.