ಮಂಡ್ಯ, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮತದಾರರ ಪಟ್ಟಿಗೂ ಹಾಗೂ ಪ್ರಮಾಣ ಪತ್ರಕ್ಕೂ ಹೊಂದಾಣಿಕೆ ಇಲ್ಲದಿರು ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಬಿ.ಎಸ್.ಗೌಡ ಅವರು ನಿಖಿಲ್ಕುಮಾರಸ್ವಾಮಿ ನಾಮಪತ್ರ ತಿರಸ್ಕರಿಸುವಂತೆ ಸಿಇಒಗೆ ದೂರು ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಎಂದಿದೆ. ನಾಮಪತ್ರ ಸಲ್ಲಿಕೆ ಅಫಿಡವಿಟ್ ನಲ್ಲಿ ನಿಖಿಲ್ ಕೆ ಎಂದಿದೆ. ಮತದಾರರ ಪಟ್ಟಿಗೂ ಹಾಗೂ ಪ್ರಮಾಣ ಪತ್ರಕ್ಕೂ ಹೊಂದಾಣಿ ಇಲ್ಲ . ಹಾಗಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧುಗೊಳಿಸುವಮತೆ ಮನವಿ ಮಾಡಿದ್ದಾರೆ.
ಇನ್ನು ಚುನಾವಣಾಧಿಕಾರಿ ವಿರುದ್ಧ ಸಾಕಷ್ಟು ಅರೋಪಗಳು ಕೇಳಿ ಬಂದಿದ್ದು, ಹೀಗಾಗಿ ಚುನಾವಣಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಬಿ.ಎಸ್. ಗೌಡ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.