ನಿಖಿಲ್ ಕುಮಾರಸ್ವಾಮಿಗೆ ಯಶ್ ಟಾಂಗ್

ನಿಖಿಲ್ ಕುಮಾರಸ್ವಾಮಿಗೆ ಯಶ್ ಟಾಂಗ್

ಮದ್ದೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ, ನಾವೆಲ್ಲ ಬಡವರು, ನಮಗೆ ಯೊಗ್ಯತೆ ಇಲ್ಲ. ನಾವು ನಮ್ಮ ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ. ಯೋಗ್ಯತೆ ಬಗ್ಗೆ ತಲೆಕೆಡಸಿಕೊಳ್ಳಬೇಡಿ ಎಂದು ರಾಕಿಂಗ್ ಸ್ಟಾರ್ ಯಶ್ ಟಾಂಗ್ ನೀಡಿದ್ದಾರೆ.

ಯರಗನಹಳ್ಳಿಯಲ್ಲಿ ಮಾತನಾಡಿದ ಯಶ್, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿರೋ ಅಂಬರೀಶಣ್ಣನವರ ಹೆಂಡತಿ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿ ಸ್ವಾಭಿಮಾನವನ್ನ ಉಳಿಸಿ. ದುಡ್ಡಿನಿಂದ ಯಾರನ್ನೂ ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು. ಈ ಹಿಂದೆ ನಿಖಿಲ್ ಕುಮಾರಸ್ವಾಮಿ, ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಇಂದು ಯಶ್ ತಿರುಗೇಟು ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos