ಬೆಳಗಾವಿ, ಮೇ.13, ನ್ಯೂಸ್ ಎಕ್ಸ್ ಪ್ರೆಸ್ : ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ನಡುವಿನ ಸಂಭಾಷಣೆ ವಿಡಿಯೋ ತುಣುಕು ಇದೀಗ ಭಾರೀ ವೈರಲ್ ಆಗಿದೆ. “ ಮಗನೇ ನಿಖಿಲ್ ಎಲ್ಲಿದ್ದೀಯಪ್ಪಾ’? ಸಿನಿಮಾ ಬರಬಾರದು.ಟ್ರೋಲ್ ಆಗಿರೋ ವಿಚಾರ ಸಿನಿಮಾ ಆಗಬಾರದುಎಂದು ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದೀಯಪ್ಪಾ? ಅನ್ನೋ ಟೈಟಲ್ ಅನ್ನು ಯಾವುದೇ ಸಿನಿಮಾಗೆ ಕೊಡಬಾರದು. ಇದಕ್ಕೆ ಫಿಲ್ಮ್ ಚೇಂಬರ್ ಕೂಡ ಅವಕಾಶ ಕೊಡಬಾರದು. ಒಬ್ಬರ ತೇಜೋವಧೆ ಮಾಡೋದು ಸರಿಯಲ್ಲ.
ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಲೆಜೆಂಡ್ಸ್ 30-40 ವರ್ಷ ದುಡಿದು ಆ ಸ್ಥಾನಕ್ಕೆ ಏರಿದ್ದಾರೆ. ಅವರ ಕಾಲು ಎಳೆಯೋದು ಸರಿಯಲ್ಲ. ‘ನಿಖಿಲ್ ಎಲ್ಲಿದ್ದೀಯಪ್ಪಾ’? ಟ್ರೋಲ್ ವಿಚಾರ ಜಾಗ್ವಾರ್ ಸಿನಿಮಾ ಆಡಿಯೋ ಬಿಡುಗಡೆಯಲ್ಲಿ ನಡೆದಿದ್ದು, ಇದರಲ್ಲಿ ಸಿನಿಮಾ ಗಿಮಿಕ್ ಅನ್ನು ರಾಜಕೀಯಕ್ಕೆ ಬಳಸೋದು ತಪ್ಪಲ್ಲ. ನಾನು ಸಿನಿಮಾಗಾಗಿ ಅನೇಕ ಗಿಮಿಕ್ ಮಾಡ್ತೀನಿ. ನಿಖಿಲ್ ಎಲ್ಲಿದ್ದೀಯಪ್ಪಾ? ಸಿನಿಮಾ ಬರೋದು ಬೇಡ. ದರ್ಶನ್, ಯಶ್ ಜೋಡೆತ್ತು ಸಿನಿಮಾ ಬಂದ್ರೆ ಬರಲಿ ಎಂದು ಪ್ರಥಮ್ ಹೇಳಿದ್ದಾರೆ