ದೇವೇಗೌಡರು ಸೋಲಲು ನಿಖಿಲ್ ಕಾರಣ: ಕೆ.ಎನ್.ರಾಜಣ್ಣ

ದೇವೇಗೌಡರು ಸೋಲಲು ನಿಖಿಲ್ ಕಾರಣ: ಕೆ.ಎನ್.ರಾಜಣ್ಣ

ತುಮಕೂರು, ಮೇ.24, ನ್ಯೂಸ್ ಎಕ್ಸ್ ಪ್ರೆಸ್: ಮಧುಗಿರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಕುಂಚಿಕ ಸಮುದಾಯದ ಹೆಣ್ಣುಮಗಳ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆಮೇಲೆ ಆ ಹುಡುಗಿಯನ್ನು ಬಿಟ್ಟುಬಿಟ್ಟ. ಅದು ಅಂಡರ್ ಕರೆಂಟ್ ಆಗಿ, ಅದು ಇಲ್ಲಿನ ಜನತೆ ಗೌಡರ ವಿರುದ್ದ ಮತಹಾಕಲು ಕಾರಣವಾಯಿತು ಎನ್ನುವ ಹೇಳಿಕೆಯನ್ನು ರಾಜಣ್ಣ ನೀಡಿದ್ದಾರೆ.

ಕಂಡ ಕಂಡಲ್ಲಿ ದುಡ್ಡು ಹೊಡೆದು ದೇವಸ್ಥಾನಕ್ಕೆ ಹೋಗಿ ಪೂಜೆ ಕಂಡ ಕಂಡಲ್ಲಿ ದುಡ್ಡು ಹೊಡೆದು ದೇವಸ್ಥಾನಕ್ಕೆ ಹೋಗಿ ಪೂಜೆ, ಹೋಮ ಮಾಡಿಸಿದರೆ ಏನು ಪ್ರಯೋಜನ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಟೀಕಿಸಿರುವ ಕೆ ಎನ್ ರಾಜಣ್ಣ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಎಲ್ಲಿದೆ. ಸರಕಾರ ಇರುವುದು ದೇವೇಗೌಡರ ಮನೆಯ ಸರಕಾರ! ಲಂಚ ತಾಂಡವವಾಡುತ್ತಿದೆ, ಎಲ್ಲೆಲ್ಲೂ ಭ್ರಷ್ಟಾಚಾರ ಎಂದು ರಾಜಣ್ಣ ಕಿಡಿಕಾರಿದ್ದಾರೆ.

ದೇವೇಗೌಡರ ಮನೆಯಲ್ಲಿ ತೀರ್ಮಾನವೇ ಕ್ಯಾಬಿನೆಟ್ ಮೀಟಿಂಗ್ ದೇವೇಗೌಡರ ಮನೆಯಲ್ಲಿ ತೀರ್ಮಾನ ಮಾಡಿಕೊಂಡು ಬಂದಿರುವುದನ್ನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮಾತನಾಡುತ್ತಾರೆ. ಈ ಸರಕಾರ ಎಷ್ಟು ಬೇಗ ಪತನಗೊಳ್ಳುತ್ತೋ ಅಷ್ಟು ರಾಜ್ಯದ ಜನತೆಗೆ ಕ್ಷೇಮ ಎನ್ನುವ ಮಾತನ್ನು ಕೆ ಎನ್ ರಾಜಣ್ಣ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos