ನಿಖಿಲ್, ಅಭಿಷೇಕ್ ಅಂಬರೀಶ್ ಮತ್ತೆ ಒಂದಾದ್ರ.?

ನಿಖಿಲ್, ಅಭಿಷೇಕ್ ಅಂಬರೀಶ್ ಮತ್ತೆ ಒಂದಾದ್ರ.?

ಮಂಡ್ಯ, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ನಿಖಿಲ್ ಮತ್ತು ಅಭಿ ಕುಚುಕು ಗೆಳೆಯರ ರೀತಿಯಲ್ಲಿ ಇದ್ದರು. ಇದೀಗ ಶತ್ರುಗಳ ರೀತಿಯಲ್ಲಿ ಆಗಿ ಬಿಟ್ಟಿದ್ದಾರೆ. ಮಂಡ್ಯ ಅಖಾಡದಲ್ಲಿ ಇಬ್ಬರು ಎದುರಾಳಿಗಳಾಗಿದ್ದರು.

ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಚಿತ್ರ ಅಮರ್ ನಾಳೆ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ ವಿಶ್ ಮಾಡಿದ್ದಾರೆ. ರಾಜಕೀಯಕ್ಕಿಂತ ನನಗೆ ಸಂಬಂಧ ಬಹಳ ಮುಖ್ಯ. ನಾನು ಸಂಬಂಧಗಳಿಗೆ ಗೌರವ ಕೊಡುತ್ತೇನೆ. ಸುಮಕ್ಕ ಅವರ ಗೆಲುವಿಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ಮಂಡ್ಯ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ನನ್ನ ಸೋಲಿಗೆ ಯಾರೂ ಕಾರಣಕರ್ತರಲ್ಲ. ನನ್ನ ಸೋಲಿಗೆ ನಾನೇ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ನಿಖಿಲ್ ಸೋತಿದ್ದರೂ ಕೂಡ ತನ್ನ ಎದುರಾಳಿಗೆ ಶುಭಾಷಯ ತಿಳಿಸಿದ್ದಾರೆ.. ಅದೇ ರೀತಿ ಅಮರ್ ಸಿನಿಮಾಗೂ ಶುಭಾಯಷ ತಿಳಿಸಿದ್ದಾರೆ. ಜಗಳಗಳನ್ನು ಮರೆತು  ಮತ್ತೆ ಒಂದಾಗ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos