ನಿಖಿಲ್ ಸುಮಲತಾಗೆ ಮಾತಿನಲ್ಲೇ ಟಾಂಗ್?

ನಿಖಿಲ್ ಸುಮಲತಾಗೆ ಮಾತಿನಲ್ಲೇ ಟಾಂಗ್?

ಮಂಡ್ಯ, ಜೂ. 25: 2019 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯವೆ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದು ಮಂಡ್ಯ ಕ್ಷೇತ್ರ. ಹೌದು, ಮಂಡ್ಯ ಅಖಾಡ ನಿಖಿಲ್ ಮತ್ತು ಸುಮಲತಾ ಇಬ್ಬರು ಕೂಡ ಅಖಾಡದಲ್ಲಿ ಸಖತ್ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಖಾಡದಲ್ಲಿ ಗೆದ್ದಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ. ಇದೀಗ ಮಂಡ್ಯದ ನೂತನ ಸಂಸದೆ ಸುಮಲತಾ ಹೆಗಲ ಮೇಲೆ ಸಾಕಷ್ಟು ಜವಬ್ಧಾರಿಗಳು ಬಂದಿವೆ. ಅದನ್ನೆ ಇದೀಗ ನಿಖಿಲ್ ವ್ಯಂಗ್ಯವಾಗಿ ಸುಮಲತಾ ಅವರನ್ನು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾವೇರಿ ನದಿ ನೀರು ವಿವಾದ ಬಗೆಹರಿಸುವ ಜವಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿ ನೂತನ ಸಂಸದೆ ಸುಮಲತಾ ಅವರ ಹೆಗಲಿಗೆ ಹೊರಸಿ ಬಿಟ್ಟಿದ್ದಾರೆ. ನಿಖಿಲ್ ಜೆಡಿಎಸ್ ಕಾರ್ಯಕರ್ತರ ಮನೆಗೆ ಆಗಮಿಸಿದ್ದ ಸಮಯದಲ್ಲಿ ಈ ರೀತಿ ಮಾತನಾಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕಾವೇರಿ ವಿವಾದವನ್ನು ಸುಮಲತಾ ಅವರು ಬಗೆ ಹರಿಸುತ್ತಾರೆ. ಅವರಿಗೆ ಒಳ್ಳೆಯ ಕಾಂಟ್ಯಾಕ್ಟ್ಸ್ ಇದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ. ಮೋದಿಯು ಕೂಡ ಅವರಿಗೆ ಚಿರ ಪರಿಚಿತರಾಗಿದ್ದಾರೆ. ಅವರೆಲ್ಲರ ಜೊತೆ ಮಾತಾಡಿ ಕಾವೇರಿ ವಿವಾದವನ್ನು ಬಗೆಹರಿಸುತ್ತಾರೆ ಎಂದು ಟೀಕಿಸಿ ವ್ಯಂಗ್ಯವಾಗಿ ಮಾತನಾಡಿದರು.ಅಷ್ಟೆ ಅಲ್ಲದೆ ನಾವೆಲ್ಲ ಸಣ್ಣವರು, ಜನರು ಆರಿಸಿರುವವರು ಕಾವೇರಿ ವಿವಾದವನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಟಾಂಗ್ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos