ನವದೆಹಲಿ, ಮೇ. 27, ನ್ಯೂಸ್ ಎಕ್ಸ್ ಪ್ರೆಸ್: ‘’ಭಾರತದ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಯೋಗ ಗುರು, ಪತಂಜಲಿ ಉತ್ಪನ್ನಗಳ ಸಂಸ್ಥೆ ಸಂಸ್ಥಾಪಕ ಬಾಬಾ ರಾಮ್ದೇವ್ ಅವರು ಹೊಸ ಐಡಿಯಾ ‘ನೀಡಿದ್ದಾರೆ.
ಯಾವುದೇ ದಂಪತಿಗೆ ಹುಟ್ಟುವ ಮೂರನೇ ಮಗು ಹಾಗೂ ನಂತರದ ಮಗುವಿಗೆ ಮತದಾನದ ಹಕ್ಕನ್ನು ಸರ್ಕಾರ ನಿರಾಕರಿಸಬೇಕು, ಹೀಗೊಂದು ಕಾನೂನನ್ನು ದೇಶದಲ್ಲಿ ತಂದರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ ಎಂದು ಬಾಬಾ ರಾಮ್ದೇವ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅಷ್ಟೆ ಅಲ್ಲ, ಮೂರನೇ ಮತ್ತು ನಂತರದ ಮಗುವು ಮುಂದೆಹೋಗಿ ಚುನಾವಣೆಗಳಲ್ಲಿ ನಿಲ್ಲುವಂತಿಲ್ಲ, ಆತನಿಗೆ ಸರ್ಕಾರಿ ಉದ್ಯೋಗವಾಗಲಿ ಮತ್ತಿತರ ಸೇವೆಗಳು ದೊರಕುವುದಿಲ್ಲವೆಂದು ನಿಯಮ ತರಬೇಕಿದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.