ಪೀಣ್ಯ ದಾಸರಹಳ್ಳಿ, ಆ. 17: ನಗರದ ಪ್ರೊಟೆಕ್ಟ್ ಗ್ರೂಪ್ ಸಂಸ್ಥೆಯವತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕುಡಿಯುವ ನೀರು, ಚಪಾತಿ, ಬಿಸ್ಕತ್, ಮುಂತಾದ ಅವಶ್ಯಕ ವಸ್ತುಗಳನ್ನು ಇಂದು ಕಳಿಸಿಕೋಡಲಾಯಿತು ಗ್ರೂಪ್ ನ ಅಂಗ ಸಂಸ್ಥೆಯಾದ ಕ್ಯಾರಿಬ್ಯಾಗ್ ಫೌಂಡೇಶನ್ ವತಿಯಿಂದ ಗಂಜಿ ಕೇಂದ್ರಗಳ ಸ್ವಚ್ಛತೆಗಾಗಿ ಬ್ರಷ್ ಗಳು ಮತ್ತು ಸ್ವಚ್ಛತಾ ಸಾಮಗ್ರಿಗಳನ್ನು ಕಳುಹಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಘುನಾಥ್ ಸೋಸಲೆ ನೆರೆಯಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಮಾಡುವವರಿಗೆ ಮತ್ತು ಹೊಸದಾಗಿ ನಿರ್ಮಾಣ ಮಾಡುವವರಿಗೆ ನಮ್ಮ ಸಂಸ್ಥೆಯ ವತಿಯಿಂದ ಶೇಕಡಾ 50% ರಿಯಾಯಿತಿ ದರದಲ್ಲಿ ವಾಟರ್ ಪ್ರೂಫಿಂಗ್ ಮಾಡಿಕೊಡಲಾಗವುದು ಮತ್ತು ಈ ಪ್ರಸ್ತಾವನೆಯನ್ನು ಈಗಾಗಲೇ ಮುಖ್ಯಮಂತ್ರಿಗಳ ಕಛೇರಿಗೆ ಪತ್ರಮುಖೇನ ತಿಳಿಸಲಾಗಿದೆ ಎಂದರು.
ಸಂಸ್ಥೆಯ ಮತ್ತೋರ್ವ ನಿರ್ದೇಶಕರು ಆನಂದ್ ಅವರು ಮಾತನಾಡಿ ಮನೆಗಳ ಪುನರ್ ನಿರ್ಮಾಣದಲ್ಲಿ ಬಳಸಲಾಗುವ ವಾಟರ್ ಪ್ರೂಫಿಂಗ್ ಮೇಲೆ ಶೇಕಡಾ 50% ರಿಯಾಯಿತಿ ನೀಡುತ್ತಿರುವಂತೆಯೇ ಸರ್ಕಾರಿ ಶಾಲೆಗಳಿಗೂ ನಿಡುತ್ತಿದೆವೆ ಅದರ ಪ್ರಸ್ತಾವನೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಸಿ.ಯಿ.ಓ ಗಳಿಗೆ ಕಳುಹಿಸಲಾಗಿದು ಉತ್ತಮ ಪ್ತತಿಕ್ರಿಯೆ ಬಂದಿದೆ ಎಂದು ತಿಳಿಸಿದರು. ಸಂಸ್ಥೆಯ ಅಧಿಕಾರಿಗಳು ನೌಕರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.