ನೆರೆ ಸಂತ್ರಸ್ಥರಿಗೆ ಸ್ಪಂದಿಸದ ಮೋದಿ

ನೆರೆ ಸಂತ್ರಸ್ಥರಿಗೆ ಸ್ಪಂದಿಸದ ಮೋದಿ

ಬೆಂಗಳೂರು, ಸೆ. 7 : ಚಂದ್ರನ ಮೇಲೆ ಚಂದ್ರಯಾನ-2 ಲ್ಯಾಂಡ್ ಆಗಲಿದ್ದು, ನೇರ ಪ್ರಸಾರ ವಿಕ್ಷಣೆಗೆಂದು ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ನೆರೆ ಸಂತ್ರಸ್ಥರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತೆ ಬೇಜವಾಬ್ದಾರಿ ವರ್ತಿಸಿರುವುದು ಕಂಡು ಬಂದಿದೆ.
ರೋಚಕ ಹಾಗೂ ಕುತೂಹಲ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ ಹಿನ್ನಲೆ ಉತ್ತರ ಕರ್ನಾಟಕದಲ್ಲಿ ಕಾಣದಂತ ಅತ್ಯಂತ ಭೀಕರ, ಪ್ರವಾಹಕ್ಕೆ ಒಳಗಾಗಿ ನಿರಾಶ್ರೀತರಾಗಿ ಬದಕು ಸಾಗಿಸುತ್ತಿದ್ದಾರೆ. ಇಲ್ಲಿನ ಜನರ ಪುನಃ ಉತ್ತರ ಕರ್ನಾಟಕ ಕಟ್ಟುವ ಚಿಂತೆಯಲ್ಲಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕಿಂಚಿತ್ತು ಕಾಳಜಿ ಇಲ್ಲದಂತೆ, ಬೇಜವಾಬ್ದಾರಿ ವರ್ತಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನಾನಾ ಸಂಸ್ಥೆ, ಸಂಘ , ಕಂಪನಿ, ಉತ್ತರ ಕರ್ನಾಟಕ ಪುನರ್ ನಿರ್ಮಾಣಕ್ಕೆ ಕೋಟ್ಯಾತರ ರೂ. ಧನ ಸಹಾಯ ನೀಡಿದೆ. ಪ್ರಧಾನಿ ಮೋದಿ ಅವರು ಇಸ್ರೋಗೆ ಆಗಮಿಸಿ ಭಾಷಣ ಮಾಡಿ ಹೊರಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos