ನೇಣುಗೆ ಶರಣಾಗಿದ್ದ: ಮಹಿಳಾ ಪೇದೆ 

ನೇಣುಗೆ ಶರಣಾಗಿದ್ದ: ಮಹಿಳಾ ಪೇದೆ 

ಹೈದರಾಬಾದ್: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಆಂಧ್ರಪ್ರದೇಶದ ವಿಶಾಖಪಟ್ಟಣದ ಆನಂದಪುರಂನಲ್ಲಿ ನಡೆದಿದೆ.

ಕರನಂ ಕುಮಾರಿ(22) ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಪೇದೆ. ಪತಿಯೊಂದಿಗಿನ ಗಲಾಟೆಯಿಂದ ರೋಸಿ ಹೋಗಿದ್ದ ಕರನಂ ಕುಮಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇವರ ಆತ್ಮಹತ್ಯೆಗೆ ಪ್ರಮುಖ ಕಾರಣ ಪತಿಯ ವರ್ತನೆ ಎನ್ನಲಾಗುತ್ತಿದೆ.

ಕರನಂ ಕುಮಾರಿ ಮತ್ತು ರಾಜೇಂದ್ರ ಇವರಿಬ್ಬರದೂ ಪ್ರೇಮ ವಿವಾಹ. ಕುಮಾರಿ ಮನೆಯವರನ್ನು ನಿರಾಕರಿಸಿ ರಾಜೇಂದ್ರನನ್ನು ಮದುವೆಯಾಗಿದ್ದಳು. ಮದುವೆಯಾದ ಕೆಲವೇ ಕೆಲವು ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ತನ್ನ ಪತಿಯ ವರ್ತನೆ ಸರಿ ಇಲ್ಲ ಹಾಗೂ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ರೋಸಿ ಹೋಗಿದ್ದು, ಕರನಂ ನೇಣುಗೆ ಶರಣಾಗಿದ್ದಾಳೆ.

ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಆಕೆಯ ಪತಿಗೆ ಕರೆಮಾಡಿ ವಿಷಯ ತಿಳಿಸಿದ್ದರು.
ಆದರೆ  ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದ ರಾಜೇಂದ್ರ ಯಾವುದೇ
ಪ್ರತಿಕ್ರಿಯೆ ನೀಡಿಲ್ಲ. ಕುಮಾರಿ ತನ್ನ ತಂದೆ-ತಾಯಿಯರಿಗೂ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ
ಎಂಬುದಾಗಿ ತಿಳಿಸಿದ್ದಾರೆ. ಅವರು ಬರುವ ವೇಳೆಗೆ ಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು
ಎಂಬುವುದು ವರದಿಯಾಗಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ
ಕಳುಹಿಸಲಾಗಿದೆ. ಪ್ರಕರಣವು ಖಮೀಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos