ಮೊದಲ ಹಂತದಲ್ಲಿ ಕಾಂಗ್ರೆಸ್‍ ಗೆ ನಿರಾಸೆ..!

ಮೊದಲ ಹಂತದಲ್ಲಿ ಕಾಂಗ್ರೆಸ್‍ ಗೆ ನಿರಾಸೆ..!

ಬೆಂಗಳೂರು, ಮೇ.23, ನ್ಯೂಸ್‍ ಎಕ್ಸ್ ಪ್ರೆಸ್‍: ಮೊದಲ ಹಂತದಲ್ಲಿ ಕಾಂಗ್ರೆಸ್‍ ಹಾಗೂ ಇತರೆ ಪಕ್ಷಗಳಿಗೆ ನಿರಾಸೆಯಾಗಿದೆ. ಮೊದಲ ಹಂತದ ಮತ ಎಣಿಕೆಯಲ್ಲಿ ದೇವೇಗೌಡರಿಗೆ ಹಿನ್ನೆಡೆ ಆಗಿದೆ. ಮೈಸೂರಿನಲ್ಲಿ ಪ್ರತಾಪ್‍ ಸಿಂಹ ಮುನ್ನಡೆ ಸಾಧಿಸಿದ್ರೆ, ಚಿಕ್ಕೋಡಿಯಲ್ಲಿ ಪ್ರಕಾಶ್‍ ಹುಕ್ಕೇರಿಗೆ ಹಿನ್ನೆಡೆ ಆಗಿದೆ. ಹಾಸನದಲ್ಲಿ ಮೊದಲ ಸುತ್ತಿನ ಮತಎಣಿಕೆಯಲ್ಲಿ ಪ್ರಜ್ವಲ್‍ ರೇವಣ್ಣ ಮುನ್ನಡೆ ಸಾಧಿಸಿದ್ದಾರೆ.

ಬೀದರ್ ನಲ್ಲಿ ಭಗವಂತ ಖೂಬಾ ಮುನ್ನಡೆ ಸಾಧಿಸಿದ್ರೆ, ಬಳ್ಳಾರಿಯಲ್ಲಿ ಉಗ್ರಪ್ಪ ಹಿನ್ನೆಡೆ ಆಗಿದೆ. ಕೋಲಾರದಲ್ಲಿ 2 ನೇ ಹಂತದ ಮತಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನೆಡೆ ಸಾಧಿಸಿದ್ದಾರೆ. ಕೆ.ಹೆಚ್‍ ಮುನಿಯಪ್ಪಗೆ 18 ಸಾವಿರ ಮತಗಳಿಂದ ಹಿನ್ನೆಡೆ ಸಾಧಿಸಿದ್ದಾರೆ. ಚಿಕ್ಕಮಗಳೂರು- ಉಡುಪಿಯಲ್ಲಿ ಶೋಭಾ ಕರಂದ್ಲಾಜೆ 18 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. 5 ನೇ ಸುತ್ತಿನಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸ್‍ ಪ್ರಸಾದ್‍ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಮುನ್ನಡೆ, ಶಿವಮೊಗ್ಗದಲ್ಲಿ 2 ನೇ ಸುತ್ತಿನಲ್ಲಿ ಬಿ.ವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ.

ಮ್ಯಾಜಿಕ್ ಗಡಿ ದಾಟಿದ ಎನ್‍ಡಿಎ

ಇನ್ನು ಮೊದಲ ಹಂತದ ಮತಎಣಿಕೆಯಲ್ಲಿ ಒಟ್ಟು 281 ಕ್ಷೇತ್ರದಲ್ಲಿ ಎನ್‍ ಡಿಎ ಮುನ್ನಡೆ ಸಾಧಿಸಿದ್ರೆ, ಯುಪಿಎ ಕೇವಲ 122 ಹಾಗೂ ಇತರೆ 114 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಎನ್‍ಡಿಎ ಮ್ಯಾಜಿಕ್ ನಂಬರ್ ಗಡಿ ದಾಟಿರೋದು ಎನ್‍ ಡಿ ವಿರೋಧಿಗಳಲ್ಲಿ ನಡುಕ ಶುರುವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos