ನಾಯಿ ಹಿಡಿಯಲು ಬಾವಿಗೆ ಬಿದ್ದ ಚಿರತೆ

ನಾಯಿ ಹಿಡಿಯಲು ಬಾವಿಗೆ ಬಿದ್ದ ಚಿರತೆ

ಬಂಟ್ವಾಳ, ಸೆ. 30 : ನಾಯಿ ಹಿಡಿಯಲು ಬಂದು ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಘಟನೆ ಬಂಟ್ವಾಳ ತಾಲೂಕಿನ ರಾಯಿ ಸಮೀಪ ಸೋಮವಾರ ಮುಂಜಾನೆ ನಡೆದಿದೆ. ಇಲ್ಲಿನ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಅವರ ಮನೆಯಂಗಳದಲ್ಲಿದ್ದ ಎರಡು ಸಾಕು ನಾಯಿಗಳನ್ನು ಹಿಡಿಯಲು ಸೋಮವಾರ ಮುಂಜಾನೆ ಚಿರತೆ ಬಂದಿತ್ತು. ಆದರೆ ತಪ್ಪಿ ಬಾವಿಗೆ ಬಿದ್ದಿದೆ.
ಸ್ಥಳಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನೋಡಲು ಜನರು ಅಪಾರ ಸಂಖ್ಯೆಯಲ್ಲಿ ಕುತೂಹಲದಿಂದ ಸೇರಿದ್ದಾರೆ.
ಇಲ್ಲಿನ ದೈಲ, ಅಮ್ಯಾಲು, ಕೈತ್ರೋಡಿ, ಬದನಡಿ ಮತ್ತಿತರ ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಲ್ಲಿ ಹಲವಾರು ನಾಯಿ ಮತ್ತು ಜಾನುವಾರುಗಳನ್ನು ಚಿರತೆ ಕೊಂಡೊಯ್ದಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos