ಹುಬ್ಬಳ್ಳಿ,ಮೇ.17, ನ್ಯೂಸ್ ಎಕ್ಸ್ ಪ್ರೆಸ್: ನಟಿ ಹಾಗೂ ಬಿಜೆಪಿ ನಾಯಕಿ ಶೃತಿಯವರು ಆಸ್ಪತ್ರೆಗೆ ದಾಖಲಾಗಿದ್ರು. ಚರ್ಮ ಕಾಯಿಲೆಯಿಂದ ಬಳಲ್ತಿದ್ದ ಶೃತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಚುನಾವಣಾ ಪ್ರಚಾರಕ್ಕೆ ವಾಪಾಸ್ಸಾಗಿದ್ದಾರೆ.
‘ನಾನು ಆರಾಮಾಗಿದ್ದೀನಿ’
ನಿನ್ನೆ ಕುಂದಗೋಳ ಉಪ ಚುನಾವಣೆಯ ಪ್ರಚಾರಕ್ಕೆ ಹುಬ್ಬಳ್ಳಿಗೆ ಹೋಗಲು ಬೆಳಗ್ಗೆ 5 ಗಂಟೆಗೆ ಎದ್ದಿದ್ರಂತೆ. ಅವರಿಗೆ ತುಟಿ ಕೊಂಚ ಊದಿಕೊಂಡಂತೆ ಆಗಿದೆ. ನಂತರ ನಾಲಿಗೆ ದಪ್ಪ ಆಗಲು ಪ್ರಾರಂಭವಾಗಿದ್ದು ಮಾತನಾಡಲೂ ಆಗದಂತೆ ನಾಲಗೆ ಮರಗಟ್ಟಿದಂತಾಗಿದೆ. ಸ್ವಲ್ಪ ಹೊತ್ತಿಗೆ ಉಸಿರಾಡುವುದು ಕಷ್ಟವಾದಾಗ ತಕ್ಷಣ ಕೊಲಂಬಿಯಾ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದಾರೆ. ಇದರ ಬಗ್ಗೆ ಸ್ವತ: ಪ್ರತಿಕ್ರಿಯೆ ನೀಡಿರುವ ನಟಿ ಶೃತಿ ಅಲರ್ಜಿ ಆದ ಸ್ವಲ್ಪ ಸಮಯದಲ್ಲಿಯೆ ಉಸಿರಾಡುವುದು ಕಷ್ಟವಾಯ್ತು. ತಕ್ಷಣವೇ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋದೆ. ಅವರು ಐವಿ ಇಂಜೆಕ್ಷನ್ ಕೊಟ್ಟರು. ಮಧ್ಯಾಹ್ನದ ತನಕ ಆಸ್ಪತ್ರೆಯಲ್ಲಿದ್ದು ವಾಪಸ್ಸಾಗಿದ್ದೇನೆ ಎಂದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.