ಕಂಕೇರ್, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಬಿಎಸ್ ಎಫ್ ಜವಾನರ ನಡುವೆ ನಡೆದ ಎನ್ ಕೌಂಟರ್ ದಾಳಿಯಲ್ಲಿ 4 ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಛತ್ತೀಸ್ ಗಢದಲ್ಲಿ ಲೋಕಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿರುವಾಗ ಈ ಘಟನೆ ನಡೆದಿದ್ದು ಆತಂಕ ಸೃಷ್ಟಿಸಿದೆ.
ಇದಕ್ಕೂ ಮುನ್ನ ಮಾ. 26 ರಂದು ಛತ್ತೀಸ್ ಗಢ ರಾಜಧಾನಿ ರಾಯ್ಪುರದಿಂದ 800 ಕಿ.ಮೀ. ದೂರದಲ್ಲಿರುವ ಕರ್ಕನ್ ಗುಡ ಗ್ರಾಮದ ಬಳಿ ಕಾಡಿನಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ಲಭ್ಯವಾದ ಕಾರಣ ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆ ನಡೆಸಿ, 4 ನಕ್ಸಲರನ್ನು ಬಲಿತೆಗೆದುಕೊಂಡಿದ್ದರು.