ಕನ್ನಡ ಚಿತ್ರರಂಗದ ನಾಯಕ ನಟ ನವೀನ್ ಚಂದರ್ ವಿಧಿವಶ

ಕನ್ನಡ ಚಿತ್ರರಂಗದ ನಾಯಕ ನಟ ನವೀನ್ ಚಂದರ್ ವಿಧಿವಶ

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ನಟ ಹಾಗೂ ಚಿತ್ರದ್ರೋದ್ಯಮಿ ನವೀನ್ ಚಂದರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವರಮಲ್ಲನಾಯಕನಹಳ್ಳಿ ಗ್ರಾಮದವರಾಗಿದ್ದ ನವೀನ್ ಚಂದರ್ ಇತ್ತೀಚೆಗೆ ಸಿನಿಮಾದಿಂದ ದೂರವಿದ್ದು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಅಂಬರೀಶ್ ಅಭಿನಯದ ‘ಕಾಲಚಕ್ರ’ ಚಿತ್ರದಲ್ಲಿ ಸಹನಟರಾಗಿ ಅಭಿನಯಿಸಿದ ನವೀನ್ ಚಂದರ್ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಕಾದಂಬರಿ’ ಚಿತ್ರದ ಮೂಲಕ ನಾಯಕರಾಗಿ ನಟಿಸಿದ್ದಾರೆ. ‘ಪ್ರಿಯಾ ಓ ಪ್ರಿಯಾ’, ‘ಪೂಜಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಬೆಂಗಳೂರಿನಲ್ಲಿ ಥಿಯೇಟರ್ ಹೊಂದಿದ್ದ ಅವರು ಕೃಷಿ ಮಾಡಿಸುತ್ತಿದ್ದರು. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos