ನವವಿವಾಹಿತ ಜೋಡಿಯ ದುರಂತ ಅಂತ್ಯ

ನವವಿವಾಹಿತ ಜೋಡಿಯ ದುರಂತ ಅಂತ್ಯ

ಬೆಂಗಳೂರು, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಮದುವೆಯಾಗಿ ಸುಖ ಸಂಸಾರ ನಡೆಸಬೇಕಿದ್ದ ಯುವಜೋಡಿಯೊಂದು ದುರಂತ ಅಂತ್ಯಕಂಡಿದೆ. ಒಂದೇ ವಾರಕ್ಕೆ ನವದಂಪತಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಇದಕ್ಕೆ ಪೋಷಕರ ಕಿರುಕುಳ ಕಾರಣ ಎಂಬ ಆರೋಪ ಕೇಳಿಬಂದಿದೆ. ಮದುವೆಯಾದ ಒಂದೇ ವಾರಕ್ಕೆ ಯುವ ದಂಪತಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ದುರಂತ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ವೀರಾಪುರ ಬಳಿ ನಡೆದಿದೆ. ಇವರಿಬ್ಬರು ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಕಿರುಕುಳ ತಾಳಲಾರದದೇ ಮನನೊಂದು ಚಲಿಸುವ ರೈಲಿಗೆ ತಲೆಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ತಾಲೂಕಿನ ವೀರಾಪುರ ಗ್ರಾಮದ ರೈಲ್ವೆ ಗೇಟ್ ಬಳಿ ಬೆಳಗ್ಗೆ ಹೈದರಬಾದ್​​ನಿಂದ ಬೆಂಗಳೂರಿನ ಕಡೆ ಬರುತ್ತಿದ್ದ ಕಾಚಿಗುಡ ಎಕ್ಸ್​ಪ್ರೆಸ್​ ರೈ,ಲಿಗೆ ತಲೆಕೊಟ್ಟು ಯುವದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಿಬ್ಬರು ಕಚೇರಿ ಪಾಳ್ಯ ನಿವಾಸಿಗಳೆಂದು ತಿಳಿದುಬಂದಿದೆ. ಒಂದು ವಾರದ ಹಿಂದೆಯಷ್ಟೇ ಈ ಜೋಡಿ ಮದುವೆಯಾಗಿದ್ದರು. ಇವರ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧದ ನಡುವೆಯೂ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹಿತೆಗೆ ಇನ್ನೂ ಅಪ್ರಾಪ್ತ ವಯಸ್ಸು ಹಾಗಾಗಿ ಆಕೆಯ ಮನೆಯವರಿಂದ ಯುವಕನಿಗೆ ಬೆದರಿಕೆಗಳು ಬರುತ್ತಿದ್ದವಂತೆ. ಪೋಷಕರ ಕಿರುಕುಳ ತಾಳಲಾರದೆ ನವವಿವಾಹಿತರು ದುರಂತ ಕಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos