ಬೆಂಗಳೂರು, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
ಈ ನಡುವೆ ತಮ್ಮ ಕೊಲೆಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಯಶ್ ಈ ಪ್ರಕರಣದ ಸಂಬಂಧ ವಿವರಣೆ ನೀಡಿದ್ದಾರೆ.
ಸುಪಾರಿ ಕೇಸ್ನ ಎಫ್ಐಆರ್ನಲ್ಲಿ ನನ್ನ ಹೆಸರಿಲ್ಲ. ಎಫ್ಐಆರ್ನಲ್ಲಿ ಕೇವಲ ಹೀರೋ ಎಂದು ನಮೂದಿಸಲಾಗಿದೆ. ಪೊಲೀಸರೂ ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದಾವೆ ಅಂತ ಯಶ್ ಹೇಳಿದ್ದಾರೆ. ಇನ್ನು ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಪದೇ ಪದೇ ಸುದ್ದಿಯಾಗುತ್ತಿದೆ. ಈ ರೀತಿಯ ಸುದ್ದಿಗಳಿಂದ ನಮ್ಮ ಕುಟುಂಬಸ್ಥರಿಗೆ ಆತಂಕವುಂಟಾಗುತ್ತಿದೆ. ಕಲಾವಿದರ ಜೀವನದಲ್ಲಿ ಇಂತಹ ಸಂಗತಿಗಳೂ ನಡೆಯುತ್ತಿರುತ್ತವೆ. ನನ್ನನ್ನು ಯಾರೂ, ಏನೂ ಮಾಡಲು ಸಾಧ್ಯವಿಲ್ಲ ಎಂದು ಅಂತ ಹೇಳಿದರು.