ನವದೆಹಲಿ, ಸೆ. 24 : ಗಡಿ ಭಾಗದಲ್ಲಿ ಪಾಕ್ ಪ್ರಚೋದನೆಯೊಂದಿಗೆ 500ಕ್ಕೂ ಹೆಚ್ಚು ಉಗ್ರರು ಭಾರತಕ್ಕೆ ಒಳನುಸುಳಲು ಸಂಚು ರೂಪಿಸಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಎಂಥದ್ದೇ ಕಾರ್ಯಾಚರಣೆ ನಡೆಸಲು ಸಿದ್ಧವಾಗಿರುವಂತೆ ಭಾರತೀಯ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಷ್ ಉಗ್ರರ ತರಬೇತಿ ಶಿಬಿರಗಳು ಮತ್ತೆ ಸಕ್ರಿಯವಾಗಿರುವ ಸುದ್ದಿ ಬಹಿರಂಗ ಬೆನ್ನಲ್ಲೇ ಭಾರತೀಯ ಸೇನೆ ಸಂಭಾವ್ಯ ಅನಾಹುತ ಎದುರಿಸಲು ಯುದ್ಧ ಮಾದರಿಯಲ್ಲಿ ಸನ್ನದ್ಧವಾಗಿದೆ. ಭಾರತೀಯ ವಾಯುಪಡೆ ದಾಳಿ ನಡೆಸಿದ್ದ ಪ್ರದೇಶಗಳಲ್ಲಿ ಇದೀಗ ಮತ್ತೆ ಉಗ್ರ ಚಟುವಟಿಕೆಗಳು ಆರಂಭವಾಗಿವೆ.