ಮೈಸೂರು, ಸೆ. 4 : ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಹೇಳಿದ್ದಾರೆ.
ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಳಿಯ ಯಾವದೇ ತಪ್ಪು ಮಾಡಿಲ್ಲ. ಯಾವ ಹವಾಲವೂ ಇಲ್ಲ ಅಕ್ರಮ ಸಂಪಾದನೆಯೂ ಇಲ್ಲ. ಬುಧವಾರವೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ. ಅಳಿಯನ ಬಂಧನ ಸುದ್ದಿ ಕೇಳಿದ ಕೂಡಲೇ ಮಗಳ ಜೊತೆ ಮಾತನಾಡಿದ್ದೇನೆ. ನಾವೂ ಯಾರು ಆತಂಕಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದಾರೆ.