ನಾಮಪತ್ರ ಹಿಂಪಡೆಯುವ ಕುರಿತು ಬೆಂಬಲಿಗರ ಜೊತೆ ಮುದ್ದಹನುಮೇಗೌಡ ಸಭೆ

ನಾಮಪತ್ರ ಹಿಂಪಡೆಯುವ ಕುರಿತು ಬೆಂಬಲಿಗರ ಜೊತೆ ಮುದ್ದಹನುಮೇಗೌಡ ಸಭೆ

ಬೆಂಗಳೂರು, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಂಡಾಯ ಮುದ್ದಹನುಮೇಗೌಡ ಅವರು ಇಂದು ತಮ್ಮ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಸಂಜಯನಗರದಲ್ಲಿರುವ ಮುದ್ದಹನುಮೇಗೌಡರ ನಿವಾಸದಲ್ಲಿ ಸಭೆ ನಡೆಯುತ್ತಿದೆ.  ಅವರು ಸಲ್ಲಿಸಿರುವ ನಾಮಪತ್ರ ಹಿಂಪಡೆಯಬೇಕೋ ಬೇಡವೋ ಎಂದು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ದೇವೇಗೌಡರ ವಿರುದ್ಧ ಕಣಕದಲ್ಲಿ ಉಳಿಯಬೇಕೇ ಬೇಡವೇ ಎಂಬುವುದರ ಕುರಿತು ಮುದ್ದಹನುಮೇಗೌಡ ತಮ್ಮ ಬೆಂಬಲಿಗರ ಅಭಿಪ್ರಾಯ ಆಲಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos