ನಗೆ ಗಡಲಲ್ಲಿ ಕಮಲ

ನಗೆ ಗಡಲಲ್ಲಿ ಕಮಲ

ಬೆಂಗಳೂರು , ಜು. 18 : ವಿಶ್ವಾಸ ಮತ ಪ್ರಸ್ತಾಪದ ವೇಳೆ ಕ್ರಿಯಾಲೋಪ ಎತ್ತಿ ಮಾತನಾಡಿದ ಸಿದ್ದರಾಮಯ್ಯ, ಮಾತಿನ ಭರದಲ್ಲಿ ನಾನು ವಿಪಕ್ಷದ ನಾಯಕ ಎಂದರು. ಈ ವೇಳೆ ಇಡೀ ಸದನ ನಗೆ ಗಡಲಲ್ಲಿ ತೇಲಿ, ಬಿಜೆಪಿ ನಾಯಕರು ಚಪ್ಪಳೆ ತಟ್ಟಿ ಸಂಭ್ರಮಿಸಿದರು. ತಕ್ಷಣಕ್ಕೆ ಎಚ್ಚೆತ್ತ ಅವರು, ನಾನು ನಾಲ್ಕು ವರ್ಷ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೆ. ಹೀಗಾಗಿ ಬಾಯ್ತಪ್ಪಿನಿಂದ ಹೇಳಿದೆ. ನಿಮಗೂ ನೆನಪಿರಬೇಕು ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದು. ಏನು ಖುಷಿ ಪಡುತ್ತೀರಾ ನೋಡಿ ಬಾಯ್ತಪ್ಪಿನಿಂದ ಮಾತನಾಡಿದೆ ಅಷ್ಟೇ ಎಂದು ಬಿಜೆಪಿ ನಾಯಕರ ಕಾಲೆಳೆದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಕೆಲಹೊತ್ತು ಅವರು ಖುಷಿಯಾಗಿರಲಿ ಬಿಡಿ ಎಂದ ಸಿದ್ದರಾಮಯ್ಯ ಮಾತಿಗೆ ದನಿಗೂಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos