ತುಂಬಿ ಹರಿಯೋ ಕೃಷ್ಣಾ ನದಿಯಲ್ಲಿ ಈಜು ಸ್ಪರ್ಧೆ!

ತುಂಬಿ ಹರಿಯೋ ಕೃಷ್ಣಾ ನದಿಯಲ್ಲಿ ಈಜು ಸ್ಪರ್ಧೆ!

ರಾಯಚೂರು, ಆ. 6: ಜೀವದ ಹಂಗು ತೊರೆದು ಇಂದು ತಾಲೂಕಿನ ಲಿಂಗಸೂಗೂರಿನಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುವ ಘಟನೆ ನಡೆದಿದೆ. ಸ್ಪರ್ಧೆಯಲ್ಲಿ ಯಾದಗಿರಿ ಹಾಗೂ  ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಲಿಂಗಸೂಗೂರು ತಾಲೂಕಿನ ಗದ್ದಗಿ ಗ್ರಾಮದ ಗಂಗಮ್ಮನ ಕಟ್ಟಿಯಿಂದ ಸಾಯಿ ಬಾಬಾ ಮಂದಿರದವರೆಗೆ ಈಜು ಸ್ಪರ್ಧೆ ಆಯೋಜಿಸಲಾಗಿದೆ.

8-10 ಯುವಕರು ಏಕಕಾಲದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಸ್ಪರ್ಧೆಯಲ್ಲಿ ಜಯ ಸಾಧಿಸಿದವರಿಗೆ ಕೇವಲ 5 ರಿಂದ 10 ಸಾವಿರ ರೂ. ನಗದು ಹಾಗೂ ಕುರಿಮರಿ ಕೊಡುವುದಾಗಿ ಘೋಷಿಸಲಾಗಿದೆಯಂತೆ!

 

 

ಫ್ರೆಶ್ ನ್ಯೂಸ್

Latest Posts

Featured Videos