ನಾನು ದುಡ್ಡ ತಗೊಂಡಿಲ್ಲ: ಮುದ್ದಹನುಮೇಗೌಡ

ನಾನು ದುಡ್ಡ ತಗೊಂಡಿಲ್ಲ: ಮುದ್ದಹನುಮೇಗೌಡ

ತುಮಕೂರು, . 26, ನ್ಯೂಸ್ ಎಕ್ಸ್ ಪ್ರೆಸ್ : ವೈರಲ್ ಆದ ಆಡಿಯೋ ಬಗ್ಗೆ ಸಂಸದ ಮುದ್ದಹನುಮೇಗೌಡ, ದೇವರಾಣೆ ನಾನು ಯಾವುದೇ ದುಡ್ಡನ್ನು ನಾಮಪತ್ರ ಹಿಂಪಡೆಯಲು ತೆಗೆದುಕೊಂಡಿಲ್ಲ. ನನ್ನ ಕೈ ಶುದ್ದವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ತುಮಕೂರಿನ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಆಡಿಯೋದಲ್ಲಿ ಮಾತಾಡಿರುವ ಇಬ್ಬರು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿದರೆ, ಪ್ರಕರಣದ ಹಿಂದಿನ ಸತ್ಯಾಸತ್ಯತೆ ತಿಳಿಯಲಿದೆ. ಯಾಕೆಂದರೇ ನಾನಾಗಲೀ ಅಥವಾ ಯಾವುದೇ ಜವಾಬ್ದಾರಿಯುತ ವ್ಯಕ್ತಿಯಾಗಲೀ ಆಡಿಯೋದಲ್ಲಿ ಮಾತಾಡಿಲ್ಲ. ನಾನು ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನೂ ಒಂದೇ ಒಂದು ನಯಾ ಪೈಸೆ ದುಡ್ಡು ಪಡೆದಿಲ್ಲ. ಈ ಕೈನ ಬಹಳ ಶುದ್ದವಾಗಿಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos