ಬೆಂಗಳೂರು, ಜು.09: ರಾಜ್ಯದ ಸಮ್ಮಿಶ್ರ ಸರಕಾರವು ಮುಳುಗುವ ಸ್ಥಿತಿಗೆ ತಲುಪುವ ಪರಿಸ್ಥಿತಿ ಎದುರಾಗಿದ್ದು. ಶಾಸಕರೊಬ್ಬರು ನಾನು ಮೈತ್ರಿ ಸರ್ಕಾರದ ಬೆಂಬಲವಾಗಿದ್ದೇನೆ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎನ್. ಮಹೇಶ್ ಹೇಳಿಕೆಯನ್ನು ನೀಡಿದ್ದಾರೆ. ಇದರಿಂದ ಮೈತ್ರಿ ಸರಕಾರಕ್ಕೆ ಅಲ್ಪ ಸಮಾಧಾನ ದೊರಂತಿದೆ.
ಬಿಎಸ್ಪಿ ಶಾಸಕ ಎನ್.ಮಹೇಶ್ ಈ ರೀತಿ ಸಮ್ಮಿಶ್ರ ಸರಕಾರಕ್ಕೆ ಹುಲ್ಲು ಕಡ್ಡಿಯಂತೆ ಆಸರೆಯಾಗಿದ್ದಾರೆ. ಶಾಸಕರು ಸಮ್ಮಿಶ್ರ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಮಹೇಶ್, ನಾನು ಮೈತ್ರಿ ಸರ್ಕಾರದ ಬೆಂಬಲವಾಗಿದ್ದೇನೆ. ಯಾವುದೇ ಕಾರಣಕ್ಕೆ ರಾಜಿನಾಮೆ ನೀಡುವದಿಲ್ಲ ಎಂದಿದ್ದಾರೆ.
ಬೆಂಗಳೂರಿನ ಸ್ಪೀಕರ್ ಕಚೇರಿ ಬಳಿ ಮಾಹಿತಿ ನೀಡಿದ ಬಿಎಸ್ಪಿ, ಶಾಸಕ ಮಹೇಶ್. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಧಿವೇಶನದಲ್ಲಿ ಕೆಲ ವಿಷಯ ಚರ್ಚೆ ಬಗ್ಗೆ ಮಾತನಾಡಲು ಬಂದಿದ್ದೆ. ” ಎಂದಿದ್ದಾರೆ.