ಮೈಸೂರು, ಅ. 14 : ಮೈಸೂರು ಮೃಗಾಲಯಕ್ಕೆ ನೀಡಲಾಗಿದ್ದ ರಜೆಯನ್ನು ಮೃಗಾಲಯ ಇಒ ಅಜಿತ್ ಕುಲಕರ್ಣಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೈಸೂರಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು, ಅಲ್ಲಿನ ಪ್ರಾಣಿಗಳ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು, ಪ್ರಾಣಿಗಳನ್ನು ನೋಡಿ ಆನಂದ ಪಟ್ಟು ಬರುತ್ತಾರೆ. ಮೈಸೂರಿಗೆ ಏನಾದ್ರೂ ಭೇಟಿ ನೀಡಿದ್ರೇ, ಮೃಗಾಲಯಕ್ಕೆ ಮಾತ್ರ ಭೇಟಿ ನೀಡಿ ನೋಡಲು ಆಗುತ್ತಿಲಿಲ್ಲ. ಪ್ರತಿ ಮಂಗಳವಾರ ಮೃಗಾಲಯದ ಸಿಬ್ಬಂದಿಗಳಿಗೆ ವಾರದ ರಜೆ ನೀಡಲಾಗಿತ್ತು.