ಮೈಸೂರು, ಮೇ. 14, ನ್ಯೂಸ್ ಎಕ್ಸ್ ಪ್ರೆಸ್: ಮೈಸೂರು ಅರಮನೆಗೆ ಬಾಂಬ್ ಕರೆ ಬಂದಿದ್ದು, ತೀವ್ರ ಶೋಧಕಾರ್ಯ ನಡೆಸಲಾಗ್ತಿದೆ. ಆದ್ರೆ ಈವರೆಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಬಿಗೀ ಬಂದೋಬಸ್ತು ಮಾಡಲಾಗಿದೆ. ಪ್ರವಾಸಿಗರನ್ನು ಕೂಲಂಕುಷವಾಗಿ ತಪಾಸಣೆ ನಡೆಸಿ ಅರಮನೆಯೊಳಗೆ ಬಿಡಲಾಗ್ತಿದೆ. ಅರಮನೆ ಸುತ್ತಮುತ್ತ ಬಿಗೀಬಂದೋಬಸ್ತು ಮಾಡಲಾಗಿದೆ.
ಕೆಆರ್ ಎಸ್ ಭದ್ರತೆ
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬಿಗೀಭದ್ರತೆ ನೀಡಲಾಗಿದೆ. ಸ್ಥಳದಲ್ಲೇ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ವಾಹನ ಪ್ರವೇಶದ್ವಾರದಲ್ಲಿ ವಾಹನ ತಪಾಸಣೆ ನಡೆಸಲಾಗ್ತಿದೆ. ಎಲ್ಲಾ ಕಡೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.