ಮೈಸೂರು, ಅ. 23 : ಮೂತ್ರಪಿಂಡದಲ್ಲಿ ಸಣ್ಣ ಕಲ್ಲು ಇರಬಹದು ಎಂದು ಊಹಿಸಿ ಶಸ್ತ್ರಚಿಕಿತ್ಸೆ ಮಾಡಿದರೆ ಪತ್ತೆಯಾಗಿದ್ದು 800 ಗ್ರಾಂ ತೂಕದ ಕಲ್ಲು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ. ವಿರಾಜಪೇಟೆ ಮೂಲದ ಕಡಂಗ ಗ್ರಾಮದ ನಿವಾಸಿ ರಫೀಕ್ (37) ವೈದ್ಯ ವಿಶ್ವನಾಥ್ ಸಿಂಪಿ ಅವರು ಚಿಕಿತ್ಸೆ ಯಶಸ್ವಿಯಾಗಿ ಮುಗಿಸಿ ಬೃಹತ್ ಗಾತ್ರದ ಕಲ್ಲನ್ನು ಹೊರ ತೆಗೆದಿದ್ದಾರೆ.
ಕಲ್ಲು ಸುಮಾರು 800 ಗ್ರಾಂ ತೂಕವನ್ನು ಹೊಂದಿದ್ದು, ರಫೀಕ್ ಅವರು ಇತ್ತೀಚಿಗೆ ತೀವ್ರ ಹೊಟ್ಟೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಕಲ್ಲನ್ನು ವಿಶ್ವನಾಥ್ ಸಿಂಪಿ ಮತ್ತು ಅರಿವಳಿಕೆ ತಜ್ಞ ವೈದ್ಯ ಡಾ. ಸುರೇಶ್ ತಂಡ ಹೊರತೆಗೆದಿದ್ದಾರೆ. ಸದ್ಯ ರಫೀಕ್ ಅವರು ಆರೋಗ್ಯವಾಗಿದ್ದಾರೆ.