ಚಿಕ್ಕಮಗಳೂರು, ಆ. 29 : ಪ್ರವಾಹ ನಿಂತ್ರೂ ಜನರಿಗೆ ಸಂಕಷ್ಟ ಮಾತ್ರ ದೂರವಿಲ್ಲ. ರಸ್ತೆಗಳೆಲ್ಲಾ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಚಿಕ್ಕಮಗಳೂರಿನಲ್ಲಿ ಮೃತದೇಹವನ್ನ ಕೊಂಡೊಯ್ಯಲು ರಸ್ತೆಯಿಲ್ಲದೇ ತೆಪ್ಪದಲ್ಲೇ ಮೃತದೇಹ ಸಾಗಿಸಲಾಗಿದೆ. ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದ ರಾಘವೇಂದ್ರ ಎಂಬಾತ ಜಾಂಡೀಸ್ನಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ರಾಘವೇಂದ್ರ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ರು.
ಆದ್ರೆ, ಮೃತದೇಹವನ್ನ ಗ್ರಾಮಕ್ಕೆ ಕೊಂಡಯ್ಯಲು ಮಾರ್ಗವಿಲ್ಲದೆ ಸ್ಥಳೀಯರು ತೆಪ್ಪದಲ್ಲಿ ಶವ ಹೊತ್ತೊಯ್ದಿದ್ದಾರೆ.