ಬೆಳಗಾವಿ, ಜೂ. 18: ಏಕಾಏಕಿ ಮನೆಗೆ ನುಗ್ಗಿ ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ಸೋಮವಾರ ತಡ ರಾತ್ರಿಯಲ್ಲಿ ನಡೆದಿದೆ.
ಬಸವರಾಜು ಪಾಟೀಲ ಹಲ್ಲೆಗೊಳಗಾದ ಪರ್ತಕರ್ತ ಎಂದು ಗುರುತಿಸಲಾಗಿದೆ. ಪರ್ತಕರ್ತನ ಮನೆಗೆ ಬಂದು ಏಕಾಏಕಿ ಕೊಡಲಿಯಿಂದ ದಾಳಿ ನಡೆಸಿ ಊರಲ್ಲಿನ ಗ್ರಾಮಸ್ಥರ ಮೇಲೆ ಏಕಾಎಕಿ ಗುಂಡಾಗಿರಿ, ಹಲ್ಲೆ ಮಾಡುತ್ತಿದ್ದ ರಾಯಪ್ಪನ ಗುಂಡಾಗಿರಿ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದ ಬಸವರಾಜ್ ಗೆ ನನ್ನ ಬಗ್ಗೆ ಪೊಲೀಸರಿಗೆ ಯಾಕೆ ಹೇಳಿದ್ದಿಯಾ ಎಂದು ಮನೆಗೆ ನುಗ್ಗಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.
ವೀರಾಪುರ ಗ್ರಾಮದ ರಾಯಪ್ಪ ಅಂಬಡಗಟ್ಟಿ ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪರ್ತಕರ್ತ ಬಸವರಾಜು ಅವರನ್ನು ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ತಡರಾತ್ರಿಯಲ್ಲಿ ರಾಯಪ್ಪನನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದ್ದಾರೆ.