ಪತ್ತೆಯ್ತು ಅಪರಿಚಿತ ವ್ಯಕ್ತಿಯ ಶವ!

ಪತ್ತೆಯ್ತು ಅಪರಿಚಿತ ವ್ಯಕ್ತಿಯ ಶವ!

ದೊಡ್ಡಬಳ್ಳಾಪುರ, ಜು. 17 : ಮದ್ಯದಲ್ಲಿ ವಿಷ ಬೆರೆಸಿಕೊಂಡು ವ್ಯಕ್ಯಿ ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಜೂಗಾನಹಳ್ಳಿ ಬಳಿ ಅರಣ್ಯಪ್ರದೇಶದಲ್ಲಿ ಇಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿ ಮೃತದೇಹವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾಸ್ಥಳವನ್ನು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಮದ್ಯದ ಬಾಟಲಿ,ವಿಷದ ಬಾಟಲಿ ದೊರೆತಿದೆ.

ಮದ್ಯದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಭಾವಿಸಲಾಗಿದೆ.ಮೃತನ ಬಳಿ ಒಂದು ಎಟಿಎಂ ಕಾರ್ಡ್ ಬಿಟ್ಟರೆ ಮತ್ತೇನೂ ಸುಳಿವು ಸಿಕ್ಕಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos