ಮೈಸೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ದುಷ್ಕರ್ಮಿಗಳು ದೇವಾಲಯದ ಮೇಲೆ ಮಾಂಸ ಬಿಸಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಾಂಸ್ಕೃತಿಕ ನಾಡಿನ ಪ್ರತಿಷ್ಠೆಯ ದೇವರಾದ ಶ್ರೀ ಚಂದ್ರಮೌಳೀಶ್ವರ ದೇವಾಲಯದ ಮೇಲೆ ಮಾಂಸದ ತುಂಡುಗಳು ಪತ್ತೆಯಾಗಿದ್ದು, ಕೆಲವು ಹಿಂದುಪರ ಸಂಘಟನೆಗಳು ಪ್ರತಿಭಟನೆಯ ಮೂಲಕ ಖಂಡಿಸಿ, ಮಾಂಸ ತುಂಡುಗಳು ಚಲ್ಲಾಪಿಲ್ಲಿ ದೇವರ ಸನ್ನಿಧಿಯಲ್ಲಿ ಬಿದ್ದಿವೆ. ಪವಿತ್ರ ಕ್ಷೇತ್ರ ದಿಂದ ಕೂಡಿದ ಶ್ರೀ ಚಂದ್ರಮೌಳೀಶ್ವರ ದೇವಾಲಯದ ಅಪವಿತ್ರವಾಗಿದೆ. ಮಾಂಸ ಪೊಟ್ಟಣ ಪತ್ತೆಯಾಗಿದೆ.ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಎಂದು ಆಗ್ರಹಿಸಿದ್ದಾರೆ.