ಸಂಕಷ್ಟದ ಕಗ್ಗಂಟಲ್ಲಿ ಮುನಿರತ್ನ

ಸಂಕಷ್ಟದ ಕಗ್ಗಂಟಲ್ಲಿ ಮುನಿರತ್ನ

ಬೆಂಗಳೂರು, . 15: ಕೇಸ್ ವಾಪಸ್ ಪಡೆಯಲು ಮುನಿರಾಜು ಒಪ್ಪದ ಕಾರಣ ಮುನಿರತ್ನಗೆ ಸಂಕಷ್ಟ ಎದುರಾಗಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ. ಮುನಿರಾಜು ಅವರ ಮನವೊಲಿಸುವ ಪ್ರಯತ್ನ ಕಗ್ಗಂಟಾಗಿ ಪರಿಣಮಿಸಿದೆ.

ಅನರ್ಹ ಶಾಸಕ ಮುನಿರತ್ನ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರೂ ಮುನಿರಾಜುಗೌಡ ಮಾತ್ರ ತಮ್ಮ ಹಠವನ್ನು ಸಡಿಲಿಸುತ್ತಿಲ್ಲ. ಬೇಕಾದರೆ ಪಕ್ಷದ ಕಚೇರಿಯಲ್ಲಿ ಕಸ ಗುಡಿಸುತ್ತೇನೆ ಆದರೆ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಮುನಿರಾಜುಗೌಡ ಹೇಳಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥಗೊಳ್ಳಲಿ. ಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಾನಾಗಿಯೇ ಕೇಸ್ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಯವಾಗಿಯೇ ತಿರಸ್ಕರಿಸಿರುವ ಮುನಿರಾಜುಗೌಡ ನ್ಯಾಯಾಲಯದಲ್ಲಿರುವ ಮುನಿರತ್ನ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುನಿರತ್ನ ವಿರುದ್ಧದ ಹೈಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥಗೊಳ್ಳಬೇಕು ಅಥವಾ ವಾಪಸ್ ಪಡೆಯಬೇಕು.  ಆಗ ಮಾತ್ರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ದಾರಿ ಸುಗಮವಾಗಲಿದೆ. ಆದರೆ ಮುನಿರಾಜು ಅವರ ಬಿಗಿ ನಿಲುವಿನಿಂದಾಗಿ ಮುನಿರತ್ನ ಬಿಜೆಪಿ ಸೇರಿದರೂ ಆತಂಕದಿಂದಲೇ ಓಡಾಡಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos