ಬಾಗಲಕೋಟೆ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಪ್ರಚಾರದ ಕೆಲಸ ಜಾಸ್ತಿ ಇರೋ ಕಾರಣದಿಂದ ನಾನು ಸ್ಪರ್ಧೆ ಮಾಡಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ಯಥಾರಾಜ, ತಥಾ ಪ್ರಜಾ. ನಮ್ಮಲ್ಲಿ ಹಣ, ಪವರ್ ಶೇ. 20 ಜನರನ್ನು ಆಳತಾ ಇದೆ. ನಮ್ಮ ಪಾರ್ಟಿಯ ವ್ಯವಸ್ಥೆ ಮುಂದಿನ ಜನರೇಶನ್ಗಾದ್ರೂ ಹೆಲ್ಪ ಆಗಬಹುದು. ಪ್ರವಾಹದ ಜೊತೆ ಹೋಗುವುದು ಸತ್ತ ಮೀನುಗಳು. ಪ್ರವಾಹದ ವಿರುದ್ಧ ಹೋಗುವುದು ಜೀವಂತ ಮೀನುಗಳು. ಪಾಲಿಟಿಕ್ಸ್ ಬಿಜಿನೆಸ್ ಅಲ್ಲ, ಸಮಾಜ ಸೇವೆ. ರಾಜ್ಯಕ್ಕೆ ಪ್ರಬಲ ಪ್ರಾದೇಶಿಕ ಪಕ್ಷ ಬೇಕು. ಯಾರ ಜೊತೆಗೂ ಹೊಂದಾಣಿಕೆ ಆಗದೇ ಜನರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪಕ್ಷ ಬೇಕು. ಜನರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ದೇಶದಲ್ಲಿ ರಾಜಕಾರಣವೇ ಹೋಗಿ ಬಿಡಬೇಕು ಎಂದು ಉಪೇಂದ್ರ ಅಭಿಪ್ರಾಯಪ್ಟರು.