ಮುಂಬೈನಲ್ಲಿ ಮುಂದುವರೆದ ದುರಂತ

ಮುಂಬೈನಲ್ಲಿ ಮುಂದುವರೆದ ದುರಂತ

ಮುಂಬೈ, ಸೆ. 3: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್ಜಿಸಿ) ಘಟಕದಲ್ಲಿ ಇಂದು ಮುಂಜಾನೆ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡ 8 ಕಾರ್ಮಿಕರಲ್ಲಿ 3 ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ವಾಣಿಜ್ಯ ನಗರಿ ಮುಂಬೈನಲ್ಲಿ ಅಗ್ನಿ ದುರಂತಗಳ ಸರಣಿ ಮುಂದುವರೆದಿದೆ.
ಮುಂಬೈನ ಒಎನ್ಜಿಸಿ ತೈಲ ಸಂಸ್ಕರಣಾ ಘಟಕದ ಮಳೆ ನೀರು ಕಾಲುವೆಯಲ್ಲಿ (ಶೀಥಲಘದಲ್ಲಿ) ಬೆಂಕಿ ಅನಾಹುತ ಸಂಭವಿಸಿದ್ದು, ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಉನ್ನತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಮತ್ತಷ್ಟ ಬೆಂಕಿ ಮತ್ತು ಸ್ಫೋಟ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos