ಮೂಕ ರೋಧನೆ ಕೇಳೋರಿಲ್ಲ

ಮೂಕ ರೋಧನೆ ಕೇಳೋರಿಲ್ಲ

ಚಿತ್ರದುರ್ಗ, ಅ.6 : ಭರಮಸಾಗರ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಯುವಕನೊಬ್ಬ ದೇವರಿಗೆ ಬಿಟ್ಟಿದ್ದ ಗೂಳಿಯ ಮೇಲೆ ಆಸಿಡ್ ದಾಳಿ ನಡೆಸಿ ವಿಕೃತಿ ಮೆರೆದಿದ್ದಾನೆ.
ಭರಮಸಾಗರದಲ್ಲಿರುವ ದುರ್ಗಾಂಬಿಕಾ ದೇವಿಗೆ ಈ ಗೂಳಿಯನ್ನು ಬಿಡಲಾಗಿತ್ತು. ಆಸಿಡ್ ದಾಳಿಯಿಂದಾಗಿ ಗೂಳಿಯ ಚರ್ಮ ಪೂರ್ತಿ ಸುಟ್ಟು ಹೋಗಿದೆ. ಗಾಯಗಳಿಂದ ಮೂಕ ಪ್ರಾಣಿ ನರಕಯಾತನೆ ಅನುಭವಿಸುತ್ತಿದೆ. ಯುವಕ ಕಂಠಪೂರ್ತಿ ಕುಡಿದಿದ್ದರಿಂದ ಅದರ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ದುಷ್ಕೃತ್ಯ ಎಸಗಿದರೂ ಯುವಕನ ವಿರುದ್ಧ ದೂರು ದಾಖಲಿಸಲು ಭರಮಸಾಗರ ಠಾಣೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos