ಹೊಸಕೋಟೆ, ಜು.13 : ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರ ಮನೆಗೆ ಜಲಸಂಪನ್ಮೂಲ ಸಚಿವ ಹಾಗೂ ಪಕ್ಷದ ಟ್ರಬಲ್ ಶ್ಯೂಟರ್ ಡಿ.ಕೆ. ಶಿವಕುಮಾರ್ ಸೂರ್ಯೋದಯಕ್ಕೂ ಮೊದಲೇ ಭೇಟಿ ನೀಡಿ, ಸುದೀರ್ಘ ಚರ್ಚೆ ನಡೆಸಿದರು.
ಇಂದು ಬೆಳಗಿನ ಜಾವ 5 ಗಂಟೆಗೆ ಗರುಡಾಚಾರ್ ಪಾಳ್ಯದಲ್ಲಿರುವ ವಸತಿ ಸಚಿವ ಎಂಟಿಬಿ ನಾಗರಾಜು ಮನೆಗೆ ಭೇಟಿ ಮಾಡಿ, ಈಗಾಗಲೇ ಸಲ್ಲಿಸಿರುವ ರಾಜೀನಾಮೆ ಹಿಂಪಡೆಯಲು ಮನವೂಲಿಸುವ ಕೆಲಸವನ್ನು ಶಿವಕುಮಾರ್ ಸತತ ಮೂರು ಗಂಟೆಗಳ ಕಾಲ ಸಂಧಾನ ನಡೆಸಿದರು. ನಮ್ಮ ನಡುವೆ ಏನೇ ಬಿನ್ನಾಭಿಪ್ರಾಯಗಳಿದ್ರು ಅದನ್ನು ಕುಳಿತು ಬಗೆಹರಿಸುತ್ತೇವೆ. ತಾವುಗಳು ದಯಮಾಡಿ ರಾಜೀನಾಮೆ ಪತ್ರವನ್ನು ಹಿಂಪಡೆಯಿರಿ’ ಎಂದು ಹೇಳಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿದ್ದಾರೆ ಎಂದು ಆಪ್ತರು ತಿಳಿಸಿದ್ದರೆ.
ಇದೇ ವೇಳೆ ಸಚಿವ ಡಿಕೆಶಿ ಜೋತೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಜರಿದ್ದರು.