ಎಂಟಿಬಿ ನಾಗರಾಜ್ ಬೆಂಬಲಕ್ಕೆ ಜಯರಾಜ್

ಎಂಟಿಬಿ ನಾಗರಾಜ್ ಬೆಂಬಲಕ್ಕೆ ಜಯರಾಜ್

ಹೊಸಕೋಟೆ, ಅ.6 : ಹೊಸಕೋಟೆ ವಿಧಾನಸಭಾ ಕ್ಷೆÃತ್ರದ ಉಪಚುನಾವಣೆಯಲ್ಲಿ ಮಾಜಿ ಮಂತ್ರಿಗಳಾದ ಎಂಟಿಬಿ ನಾಗರಾಜ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದು ಅವರನ್ನು ಬೆಂಬಲಿಸುವುದಾಗಿ ತಿಗಳರ ಸಂಘದ ರಾಜ್ಯಾಧ್ಯಕ್ಷ ಸಿ.ಜಯರಾಜ್ ಹೇಳಿದರು.
ಅವರು ಹೊಸಕೋಟೆಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೆÃಶಿಸಿ ಮಾತನಾಡಿ. ಇಂದು ಬಿಜೆಪಿ ಪಕ್ಷ ಅಧಿಕಾರ ಪಡೆಯಲು ಕ್ಷೆÃತ್ರದ ಮಾಜಿ ಶಾಸಕರಾದ ಎಂಟಿಬಿ ನಾಗರಾಜ್ ಅವರೇ ಕಾರಣವಾಗಿದ್ದು, ಅವರು ಎಲ್ಲವನ್ನು ಬಿಟ್ಟು ಬಿಜೆಪಿ ಪಕ್ಷದಿಂದ ಉಪಚುನಾಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ನಾನು ಮತ್ತು ನಮ್ಮ ಬೆಂಬಲಿಗರು ಪಕ್ಷದಲ್ಲೆÃ ಇದ್ದು ಬೆಂಬಲ ನೀಡುವುದಾಗಿ ಹೇಳಿದರು.
ಈ ಹಿಂದೆ ಬಚ್ಚೆÃಗೌಡರು ಯಾವುದೇ ಪಕ್ಷಕ್ಕೆ ಹೋದರೆ ಅವರ ಹಿಂದೆ ನಾವೆಲ್ಲ ಹೋಗಿ ದುಡಿದಿದ್ದೆÃವೆ. ಅವರು ಸಂಸದರಾಗಲು ನಮ್ಮ ಅಳಿಲು ಸೇವೆಯೂ ಇದೆ. ರಾಜ್ಯದಲ್ಲಿ ನಮ್ಮ ಸಮಾಜವರು ಚುನಾಣೆಗೆ ಸ್ಪರ್ಧೆ ಮಾಡಿದ್ದರಿಂದ ಒಂದು ಜನಾಂಗದ ರಾಜ್ಯಾಧ್ಯಕ್ಷನಾಗಿ ಅವರ ಕಡೆ ಪ್ರಚಾರಕ್ಕೆ ಹೋಗಿದ್ದೆ. ತದನಂತರ ನನ್ನನ್ನು ಇಲ್ಲಿ ಮೂಲೆ ಗುಂಪು ಮಾಡಿದರು ಎಂದು ತಮಗಾದ ನೋವನ್ನು ಬಿಡಿಸಿಟ್ಟರು.
ಮಾಜಿ ಕೌನ್ಸಿಲರ್ ಸುಶೀಲಮ್ಮ, ರವಿ, ದೇವರಾಜು, ಮತ್ತು ಜಯರಾಜ್ ಬೆಂಬಲಿಗರು ಗೋಷ್ಠಿಯಲ್ಲಿ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos