ಶ್ರೀಗಳ ಅಂತಿಮ ದರ್ಶನ ಪಡೆದ ಸಂಸದ

ಶ್ರೀಗಳ ಅಂತಿಮ ದರ್ಶನ ಪಡೆದ ಸಂಸದ

ತುಮಕೂರು: ಸಮಾಜಕ್ಕೆ ಗೋಡೆಕೆರೆಯ ಶ್ರೀಸಿದ್ದರಾಮೇಶ್ವರ ದೇಶಿ ಕೇಂದ್ರ ಸ್ವಾಮೀಜಿಗಳ ಕೊಡುಗೆ ಅಪಾರ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಇಂದು ಹೃದಯಾಘಾತದಿಂದ ನಿಧನರಾದ ಗೋಡೆಕೆರೆ ಸಂಸ್ಥಾನ ಮಠದ ಸ್ಥಿರ ಪಠಾಧ್ಯಕ್ಷರಾದ ಶ್ರೀ ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಹೂ ಗುಚ್ಚವಿರಿಸಿ, ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆ, ಆನಾಥಾಶ್ರಮಗಳನ್ನು ತೆರೆದು ವಿದ್ಯಾಧಾನ ಮಾಡುವ ಮೂಲಕ ಸುಶಿಕ್ಷೀತ ಸಮಾಜ ಕಟ್ಟಬೇಕೆನ್ನುವ ಮಹಾದಾಸೆ ಹೊಂದಿದ್ದರು ಎಂದರು.

ಅನ್ನದಾಸೋಹದ ಜೊತೆಗೆ, ಅಕ್ಷರ ದಾಸೋಹಕ್ಕೂ ಒತ್ತು ನೀಡಿದ್ದಲ್ಲದೆ,ಮಕ್ಕಳಿಂದ ಪರಿತ್ಯಕ್ತರಾದ ವಯೋವೃದ್ದರಿಗೆ ಆಶ್ರಯ ನೀಡುವ ಮೂಲಕ ಕೊನೆಗಾಲದಲ್ಲಿ ನೆಮ್ಮದಿ ಜೀವನ ಕಂಡುಕೊಳ್ಳುವಂತೆ ಮಾಡಿದ್ದರು. ಶ್ರೀಗಳ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ದೇವರಲ್ಲಿ ಬೇಡುವುದಾಗಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಈ ವೇಳೆ ಸಂಸದರೊಂದಿಗೆ ಜಗಜೋತಿ ಸಿದ್ದರಾಮಣ್ಣ,ಪರಮಶಿವಯ್ಯ,ವಿವೇಕ್ ಮತ್ತಿತರರು ಜೊತೆಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos