ಮೈಸೂರು, ಮಾ.23, ನ್ಯೂಸ್ ಎಕ್ಸ್ ಪ್ರೆಸ್: ಸಂಸದ ಪ್ರತಾಪ್ ಸಿಂಹ ನನ್ನ ಶಿಷ್ಯ. ಸಿಂಹ ಎಂಥಾ ಸಿಂಹ? ಪೇಪರ್ ಲಯನ್, ನರಿ, ಉಗ್ರಗಾಮಿ ಅವನಿಗೆ ಮತ ಹಾಕ ಬೇಕಾ? ಅಭಿವೃದ್ಧಿ ಮಾಡಿದ್ದೇನೆ ಅಂತಾ ಬ್ರೌಷರ್ ಹಿಡ್ಕೊಂಡು ಓಡಾಡುತ್ತಿದ್ದಾನೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರೊ. ಮಹೇಶ್ ಚಂದ್ರ ಗುರು, ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನವನ್ನು ವಿರೋಧ ಮಾಡುವ ಗುಂಪನ್ನು ಬಲಪಡಿಸಬಾರದು. ಮನುವಾದಿಗಳಿಗೆ ಬಲ ಬಂದ್ರೆ ದಲಿತರಿಗೆ ಹಾಗೂ ಅಲ್ಪಸಂಖ್ಯಾರಿಗೆ ಉಳಿಗಾಲ ಇಲ್ಲ. ನಮ್ಮನ್ನ ಅಳುತ್ತಿರುವವರು ಈ ದೇಶದಲ್ಲಿ ಬದುಕುವುದಕ್ಕೆ ಅನ್ಫಿಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನುವಾದಿಗಳು ಅಧಿಕಾರಕ್ಕೆ ಬಂದ್ರೆ ನಮಗೆ ಬದುಕಲು ಜಾಗವಿರಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ಶೋ ಮ್ಯಾನ್ ಅಷ್ಟೇ. ನಮಗೆ ಸ್ಟೇಟ್ಸ್ ಮನ್ಗಳು ಬೇಕು. ಎನ್ಡಿಎ ಅಂಗ ಪಕ್ಷಗಳು ಮೂರನೇ ದರ್ಜೆಯ ನಾಯಕರು. ನಮ್ಮ ದೇಶಕ್ಕೆ ಶೋಕಿಲಾಲರ ಅವಶ್ಯಕತೆ ಇಲ್ಲ ಎಂದು ಮೋದಿ ವಿರುದ್ಧ ಪರೋಕ್ಷವಾಗಿ ಗುಡುಗಿದರು.
ದಲಿತರು ಅದಿವಾಸಿಗಳು ಇಂದು ಬದುಕುವ ಹಕ್ಕು ಕಳೆದುಕೊಂಡಿದ್ದೇವೆ. ಭಾರತದಲ್ಲಿ ಮಾನವ ಕುಲಕ್ಕೆ ಬೆಲೆಯೇ ಇಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಪ್ರೊ. ಮಹೇಶ್ ಚಂದ್ರ ಗುರು ಹರಿ ಹಾಯ್ದರು.