ರಾಜ್ಯದ 23 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿದ ಬಿಜೆಪಿ

ರಾಜ್ಯದ 23 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿದ ಬಿಜೆಪಿ

ಬೆಂಗಳೂರು, ನ್ಯೂಸ್
ಎಕ್ಸ್‍ ಪ್ರೆಸ್, ಫೆ.27:
ಕರ್ನಾಟಕ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 23 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ
ಅಂತಿಮಗೊಳಿಸಿದ್ದು, ಬಾಕಿ ಉಳಿದಿರುವ 5 ಕ್ಷೇತ್ರಗಳನ್ನು
ಎರಡನೇ ಹಂತದಲ್ಲಿ ಅಂತಿಮಗೊಳಿಸಲು ನಿರ್ಧರಿಸಿದೆ.

ಬಿಜೆಪಿ
ತೆಕ್ಕೆಯಲ್ಲಿರುವ 16 ಕ್ಷೇತ್ರಗಳಲ್ಲಿ 11 ಸಂಸದರಿಗೆ ಟಿಕೆಟ್ ನೀಡಲು ಬಿಜೆಪಿ
ನಿರ್ಧರಿಸಿದ್ದು, ಐವರು ಹಾಲಿ ಸಂಸದರ
ಬದಲಾವಣೆಗೆ ಚಿಂತನೆ ನಡೆದಿದೆ.ಹಾಲಿ
ಸಂಸದರಿಗೆ ಟಿಕೆಟ್ ಪಕ್ಕಾ ಎನ್ನುವ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ
ಹೇಳಿಕೆ ಬೆನ್ನಲ್ಲೇ ಕೆಲ ಸಂಸದರಿಗೆ ಟಿಕೆಟ್
ನೀಡದಿರುವ ಕುರಿತು ಪಕ್ಷದಲ್ಲಿ ಹೊಸ
ಪ್ರಸ್ತಾಪವಾಗಿದೆ.

ಹಿರಿಯ ನಾಯಕರೇ ಈ ಲಿಸ್ಟ್‍ನಲ್ಲಿ ಇದ್ದಾರೆ ಎನ್ನುವುದು
ಮತ್ತೊಂದು ವಿಶೇಷ. ಮೋದಿ ಸರ್ಕಾರದಲ್ಲಿ
ಸಚಿವರಾಗಿದ್ದ ಮತ್ತು ಹಾಲಿ ಸಚಿವರಾಗಿರುವ
ಪ್ರಭಾವಿಗಳು ಕೂಡ ಪಟ್ಟಿಯಲ್ಲಿದ್ದಾರೆ ಎಂದು
ಹೇಳಲಾಗುತ್ತಿದೆ.

ವಿಜಯಪುರ
ಲೋಕಸಭಾ ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ರಮೇಶ್
ಜಿಗಜಿಣಗಿ, ಮೋದಿ ಸರ್ಕಾರದಲ್ಲಿ ಸಚಿವರಾಗಿ
ಈಗ ಮಾಜಿ ಆಗಿರುವ ದಾವಣಗೆರೆ
ಸಂಸದ ಜಿ.ಎಂ. ಸಿದ್ದೇಶ್ವರ್,
ಬೆಳಗಾವಿ ಸಂಸದ ಸುರೇಶ್ ಅಂಗಡಿ,
ಕೊಪ್ಪಳ ಸಂಸದ ಸಂಗಣ್ಣ ಕರಡಿ,
ಬಾಗಲಕೋಟೆ ಸಂಸದ ಪಿ.ಸಿ.
ಗದ್ದಿಗೌಡರ್ ಗೆ ಟಿಕೆಟ್ ಅನುಮಾನವಾಗಿದೆ.

ಯಾವ ಕ್ಷೇತ್ರ ಯಾರಿಗೆ?

1.ಬೆಂಗಳೂರು
ದಕ್ಷಿಣ – ತೇಜಸ್ವಿನಿ ಅನಂತ್ ಕುಮಾರ್/ನಿರ್ಮಲಾ
ಸೀತಾರಾಮನ್

2.ಬೆಂಗಳೂರು
ಉತ್ತರ – ಡಿ.ವಿ. ಸದಾನಂದ
ಗೌಡ

3.ಬೆಂಗಳೂರು
ಕೇಂದ್ರ – ಪಿ.ಸಿ.ಮೋಹನ್

4.ಬೆಂಗಳೂರು
ಗ್ರಾಮಾಂತರ – ಸಿ.ಪಿ.ಯೋಗೇಶ್ವರ,
ತುಳಸಿ ಮುನಿರಾಜು ಗೌಡ, ರುದ್ರೇಶ್, ಮಾಜಿ
ಎಂ.ಎಲ್.ಸಿ ಅಶ್ವಥ್
ನಾರಾಯಣ

5.ಚಿಕ್ಕಬಳ್ಳಾಪುರ
– ಬಿ.ಎನ್.ಬಚ್ಚೇಗೌಡ,

6.ಕೋಲಾರ
– ಡಿ.ಎಸ್.ವೀರಯ್ಯ, ಚಿ.ನಾ.ರಾಮು, ನಾರಾಯಣ
ಸ್ವಾಮಿ

7. ಮೈಸೂರು-ಕೊಡಗು- ಪ್ರತಾಪ್ ಸಿಂಹ

8.ತುಮಕೂರು
– ಜಿ.ಎಸ್.ಬಸವರಾಜು

9.ಚಾಮರಾಜನಗರ
– ಎಂ.ಶಿವಣ್ಣ, ವಿ.ಶ್ರೀನಿವಾಸ
ಪ್ರಸಾದ್

10.ಚಿತ್ರದುರ್ಗ
– ಜನಾರ್ದನ ಸ್ವಾಮಿ

11.ಶಿವಮೊಗ್ಗ
– ಬಿ.ವೈ.ರಾಘವೇಂದ್ರ

12.ದಾವಣಗೆರೆ
– ಜಿ.ಎಂ.ಸಿದ್ದೇಶ್ವರ

13.ಚಿಕ್ಕಮಗಳೂರು
– ಉಡುಪಿ – ಶೋಭಾ ಕರಂದ್ಲಾಜೆ/ಜಯಪ್ರಕಾಶ್
ಹೆಗಡೆ

14.ದಕ್ಷಿಣ
ಕನ್ನಡ – ನಳೀನ್ ಕುಮಾರ್ ಕಟೀಲ್

15.ಉತ್ತರ
ಕನ್ನಡ – ಅನಂತ್ ಕುಮಾರ್ ಹೆಗಡೆ

16.ಚಿಕ್ಕೋಡಿ
– ರಮೇಶ್ ಕತ್ತಿ/ಪ್ರಭಾಕರ್ ಕೋರೆ

17.ಬೆಳಗಾವಿ
– ಸುರೇಶ್ ಅಂಗಡಿ

18.ಧಾರವಾಡ
– ಪ್ರಹ್ಲಾದ್ ಜೋಶಿ

19.ಹಾವೇರಿ-ಗದಗ – ಶಿವಕುಮಾರ್ ಉದಾಸಿ

20.ಕೊಪ್ಪಳ
– ಸಂಗಣ್ಣ ಕರಡಿ

21.ಬೀದರ್
– ಭಗವಂತ್ ಖೂಬಾ

22.ಬಾಗಲಕೋಟೆ
– ಪಿ.ಸಿ.ಗದ್ದಿಗೌಡರ್

23. ವಿಜಯಪುರ
– ರಮೇಶ್ ಜಿಗಜಿಣಗಿ

ಫ್ರೆಶ್ ನ್ಯೂಸ್

Latest Posts

Featured Videos