ಹಾಸನ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ‘ತಾಯಿ ಹಾಲು ಅಮೃತಕ್ಕೆ ಸಮಾನ ಅಂತಾರೆ’. ಆದ್ರೆ ಹಾಸನದ ಸಕಲೇಶಪುರದಲ್ಲಿ ತಾಯಿ ಹಾಲೇ ಮಗುವಿಗೆ ಯಮಸ್ವರೂಪಿಯಾಗಿದೆ. ಹೌದು, ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ಲೋಕೇಶ್ ದಂಪತಿಯ ಎಕೈಕ ಗಂಡು ಮಗು ರಂಜಿತಾ. ರಂಜಿತಾ ತಾಯಿ ಎದೆಹಾಲು ಕುಡಿಯುವಾಗ ನೆತ್ತಿಗೇರಿದೆ. ಉಸಿರಾಟ ಸಾಧ್ಯವಾಗದೇ ಒದ್ದಾಡಿದೆ. ಗಾಬರಿಯಾದ ಪೋಷಕರು ತಕ್ಷಣ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ದುರದೃಷ್ಟವಶಾತ್ ಮಗು ಸಾವನ್ನಪ್ಪಿದೆ.