ಬೆಳಗಾವಿ, ಜೂ. 13: ದಲಿತ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಮೋಸ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ಬೆಳಕಿಗೆ ಬಂದಿದೆ.
ಯಮಕನಮರಡಿ ಗ್ರಾಮದ ಮಂಜುನಾಥ ರಜಪೂತ ಮೋಸ ಮಾಡಿದ ಯುವಕ. ಈತ ಯುವತಿಗೆ ಮದುವೆ ಆಗುವ ಭರವಸೆ ನೀಡಿ 6 ವರ್ಷ ಪ್ರೀತಿಸಿ ದೈಹಿಕವಾಗಿ ತನ್ನ ಇಚ್ಛೆಯಂತೆ ಬಳಿಸಿಕೊಂಡು ಈಗ ಮದುವೆಯಾಗುವುದಿಲ್ಲ ಎಂದು ಹೇಳಿ ಮೋಸ ಮಾಡಿದ್ದಾನೆ. 6 ವರ್ಷಗಳಿಂದ ಅದೇ ಗ್ರಾಮದ ದಲಿತ ಯುವತಿಯನ್ನು ಪ್ರೀತಿಸುತ್ತಿದ್ದನು. ಬಳಿಕ ಆಕೆಗೆ ಮದುವೆಯಾಗುವುದಾಗಿ ಭರವಸೆ ನೀಡಿ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದಾನೆ. ಅಷ್ಟೇ ಅಲ್ಲದೇ ದೈಹಿಕವಾಗಿ ಸಂಪರ್ಕವನ್ನು ಹೊಂದಿದ್ದು, ಇದೀಗ ಯುವತಿ ದಲಿತ ಆಗಿರುವ ಕಾರಣ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಹೇಳಿ ಕೈ ಕೊಟ್ಟಿದ್ದಾನೆ. ನಂತರ ಯುವತಿಯ ಮಂಜುನಾಥನ ಕುಟುಂಬಸ್ಥರು ಆಕೆಯನ್ನು ಬೈಯ್ದು ವಾಪಸ್ ಕಳಿಸಿದ್ದಾರೆ.