ಹುಬ್ಬಳ್ಳಿ: ಕತ್ತು ಸೀಳಿ ಯುವತಿಯ ಬರ್ಬರ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕೊಟಗುಣಸಿ ಬಳಿಯ ಹೊಲದಲ್ಲಿ ಯುವತಿ ಹತ್ಯೆ ನಡೆದಿದ್ದು, ಅವಳಿನಗರದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಸುಭಾಷ್ ಮಾರಿಹಾಳ ಎಂಬುವರ ಹೊಲದಲ್ಲಿ ಕೊಲೆ ನಡೆದಿದ್ದು, ಸುಮಾರು 25 ವರ್ಷ ವಯಸ್ಸಿನ ಯುವತಿಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಯುವತಿಯ ಗುರುತು ಈವರೆಗೆ ಪತ್ತೆಯಾಗಿಲ್ಲ, ಅಲ್ಲದೆ, ಕೊಲೆಗೂ ನಿಖರ ಕಾರಣ ತಿಳಿದು ಬಂದಿಲ್ಲ.
ಯುವತಿಯ ಕತ್ತು ಸೀಳಿ ಕೊಲೆಗೈದಿರುವುದರಿಂದ ರಕ್ತದ ಮಡುವಿನಿನಲ್ಲಿ ಬಿದ್ದು ಹೊರಳಾಡಿ ಸಾವನ್ನಪ್ಪಿದ್ದು ಸ್ಪಷ್ಟವಾಗಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.