ಗದಗ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ನರಗುಂದ ಪಟ್ಟಣದಲ್ಲಿ ಮಂಗವೊಂದು ಸಾವಿನ ಮನೆಗೆ ತೆರಳಿ ತನ್ನದೇ ಆದಾ ಭಾಷೆಯಲ್ಲಿ ಶೃದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಡೆದಿದೆ. ಪಟ್ಟಣದ ದೇವೆಂದ್ರಪ್ಪ ಕಮ್ಮಾರ್ ಎಂಬುವವರು ಮೃತಪಟ್ಟಿದರು. ಕುಟುಂಬಸ್ಥರು ಅತೀವ ಶೋಕದಲ್ಲಿದರು. ಅಷ್ಟರಲ್ಲೇ ಮಂಗವೊಂದು ಮೃತರ ಮನೆಗೆ ದಾವಿಸಿದೆ. ಶವದ ಬಳಿ ಸುಮ್ಮನೆ ಕೂತು ಶೃದ್ಧಾಂಜಲಿ ಸಲ್ಲಿಸಿದೆ.
ನಂತರ ಕುಟುಂಬಸ್ಥರ ಆಕ್ರಂದನ ಕಂಡು, ತನ್ನದೇ ಭಾಷೆಯಲ್ಲಿ ಸಾಂತ್ವಾನ ಹೇಳಿದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೋಬ್ಬರಿಗೂ ತೊಂದರೆ ಮಾಡದೇ, ಕುಟುಂಬದವರಿಗೆ ಪ್ರೀತಿ ಕನಿಕರ ತೋರಿಸಿದೆ.