ಮೊಘಲ್ ದೊರೆ ಅಕ್ಬರ್ ಕಾಮುಕ- ಬಿಜೆಪಿ ಅಧ್ಯಕ್ಷ ಮದನ್

ಮೊಘಲ್ ದೊರೆ  ಅಕ್ಬರ್ ಕಾಮುಕ- ಬಿಜೆಪಿ ಅಧ್ಯಕ್ಷ ಮದನ್

ಜೈಪುರ್, ಜೂ. ಜೂನ್. 7, ನ್ಯೂಸ್ ಎಕ್ಸ್ ಪ್ರೆಸ್ : ಮೊಘಲ್ ದೊರೆ  ಅಕ್ಬರ್ ಕಾಮುಕನಾಗಿದ್ದ ಎಂದು ಹೇಳುವ ಮೂಲಕ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ವಿವಾದ ಸೃಷ್ಟಿಸಿದ್ದಾರೆ. ಮಹಾರಾಣ ಪ್ರತಾಪ್ ಜಯಂತಿ ಹಿನ್ನೆಲೆಯಲ್ಲಿ ಜೈಪುರದಲ್ಲಿ ಮಾತನಾಡುತ್ತಿದ್ದ ಅವರು, ಮೊಘಲ್ ಸಾಮ್ರಾಟ ಅಕ್ಬರ್ ಮಹಾನ್ ವ್ಯಕ್ತಿಯಾಗಿರಲಿಲ್ಲ, ಬದಲಾಗಿ ಕಾಮುಕನಾಗಿದ್ದ. ಮೀನಾ ಬಜಾರ್ ಆಯೋಜಿಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದ. ಅಲ್ಲಿ ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದರು. ಪುರುಷರಿಗೆ ಪ್ರವೇಶವಿರಲಿಲ್ಲ. ಅಕ್ಬರ್ ಮಾಡಿದಂತಹ ಇಂತಹ ದುಷ್ಕೃತ್ಯಗಳು ಇತಿಹಾಸದ ಪುಟದಲ್ಲಿ ದಾಖಲಾಗಿವೆ ಎಂದಿದ್ದಾರೆ.
ರಜಪೂತ ಮಹಿಳೆ ಕಿರಣ್ ದೇವಿ ಮೀನಾ ಬಚಾರ್ ಮುಚ್ಚಿಸುವಲ್ಲಿ ಯಶಸ್ವಿಯಾದಳು ಎಂದವರು ಹೇಳಿದ್ದಾರೆ.

ಅಕ್ಬರ್ ನಿಜವಾದ ಉದ್ದೇಶ ಲೈಂಗಿಕ ದೌರ್ಜನ್ಯ ಎಸಗುವುದು ಮತ್ತು ಆಸಭ್ಯ ಚಟುವಟಿಕೆಗಳಲ್ಲಿ ತೊಡಗಿಸುವುದಾಗಿತ್ತು. ಕಿರಣ್ ಬಹಳ ಜಾಗೃತವಾಗಿದ್ದರು. ಅಕ್ಬರ್ ವಿರೋಧ ಕಟ್ಟಿಕೊಂಡ ಆಕೆ ಆತನನ್ನು ನೆಲಕ್ಕೆ ದೂಡಿ ಎದೆಗೆ ಗುರಿ ಇಟ್ಟಳು. ಹಿಂದೂಸ್ತಾನದ ಬಾದಶಾ ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ ಆಕೆಯ ಕಾಲಿಗೆ ಬಿದ್ದು ಜೀವದಾನ ಬೇಡಿದ. ಅಂದಿನಿಂದ ಬಜಾರ್‌ನ್ನು ಮುಚ್ಚಲಾಯಿತು ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos