ದೇಶದ ಯಾವುದೇ ಪ್ರಜೆಗಳು ಭಯಪಡುವಂತಿಲ್ಲ. ಇದು ಪಾಕ್ ಆಕ್ರಮಿತ
ಕಾಶ್ಮೀರದ ಗಡಿ ನಿಯಂತ್ರಣದ ರೇಖೆಯಲ್ಲಿ
ಭಾರತೀಯ ವಾಯುಪಡೆ ದಾಳಿ ನಡೆಸಿದ
ನಂತರ ಪ್ರಧಾನಿ ನರೇಂದ್ರ ಮೋದಿ
ದೇಶದ ಜನರಿಗೆ ನೀಡಿದ ಸಂತಸದ
ಸುದ್ದಿಯಾಗಿದೆ.ರಾಜಸ್ಥಾನದ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಹೇಳಿದ್ದಿಷ್ಟು.
‘ಭಾರತ ದೇಶ ಸುರಕ್ಷಿತ ಕೈಯಲ್ಲಿದೆ.
ಯಾವತ್ತಿಗೂ ನಮ್ಮ ದೇಶ ತಲೆ
ತಗ್ಗಿಸಲು ನಾವು ಬಿಡುವುದಿಲ್ಲ. ಇಂದು
ನಮ್ಮ ದೇಶದ ವೀರ ಯೋಧರಿಗೆ
ನಾವು ನಮಿಸುತ್ತಿರುವ ದಿನ. ನಮ್ಮ ವೀರ
ಯೋಧರ ಸಾಧನೆ ಕೊಂಡಾಡುವ ದಿನ.’
ಎಂದು ಪರೋಕ್ಷವಾಗಿ ಪಾಕ್ ಮೇಲಿನ ವೈಮಾನಿಕ
ದಾಳಿ ಬಗ್ಗೆ ತಿಳಿಸಿದರು.