‘ಕೇದಾರನಾಥ’ನ ಸನ್ನಿಧಿಯಲ್ಲಿ ಪ್ರಧಾನಿ ಮೋದಿ!

‘ಕೇದಾರನಾಥ’ನ ಸನ್ನಿಧಿಯಲ್ಲಿ ಪ್ರಧಾನಿ ಮೋದಿ!

ಉತ್ತರಾಖಂಡ, ಮೇ.18, ನ್ಯೂಸ್‍ ಎಕ್ಸ್ ಪ್ರೆಸ್‍: ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಭೇಟಿಗಾಗಿ ಕೇದಾರನಾಥಕ್ಕೆ ಆಗಮಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಪ್ರಚಾರ ಕೊನೆಗೊಂಡ  ಮರುದಿನವೇ ಪ್ರಧಾನಿ ಕೇದಾರನಾಥಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇಂದು ಬೆಳಿಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ವಿಶೇಷ ಹೆಲಿಕಾಫ್ಟರ್‍ ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು.

ಎರಡು ದಿನಗಳ ಕಾಲ ಕೇದಾರನಾಥನ ಸನ್ನಿಧಿಯಲ್ಲಿರುವ ಮೋದಿ, ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್  ನಿರ್ಮಾಣ ಕಾರ್ಯಗಳ ಪ್ರಗತಿಯನ್ನು  ಪ್ರಧಾನಿ ಪರಾಮರ್ಶಿಸಲಿದ್ದಾರೆ.

ಕೇದಾರನಾಥದಲ್ಲಿ ಎರಡು ದಿನ ಕಟ್ಟೆಚ್ಚರ..!
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕೇದಾರನಾಥ ಕಣಿವೆಯ ಸುತ್ತಲಿನ ಎಲ್ಲ ಅಧಿಕಾರಿಗಳೂ ಕಟ್ಟೆಚ್ಚರದಿಂದ ನಿರ್ದೇಶನ ನೀಡಲಾಗಿದೆ ನೀಡಿದ್ದಾರೆ. ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಆರು ತಿಂಗಳ ಚಳಿಗಾಲದ ರಜೆಯ ಬಳಿಕ ಮೇ 9 ರಂದು ಕೇದಾರನಾಥ ಮಂದಿರದ ಬಾಗಿಲನ್ನು ತೆರೆಯಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos